ಟೆಕ್ ಮಹೀಂದ್ರಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೀತ್ ನಯ್ಯರ್ ಸೇರಿದಂತೆ ನಾಲ್ಕು ಮಂದಿ ನಾಮಕರಣ ನಿರ್ದೇಶಕರು ಸತ್ಯಂ ಅಡಳಿತ ಮಂಡಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತರ ಮೂವರು ಸದಸ್ಯರಾದ ಸಿಪಿ ಗುರ್ನಾನಿ, ಸಂಜಯ್ ಕಾಲ್ರಾ ಮತ್ತು ಉಲ್ಲಾಸ್ ಎನ್. ಯರ್ಗೋಪ್ ಅವರುಗಳು ಟೆಕ್ ಮಹೀಂದ್ರಾ ಸಂಸ್ಥೆಯ ವೆಂಟುರ್ಬೇ ಕನ್ಸಲ್ಟಂಟ್ಸ್ ಪ್ರೈವೇಟ್ ಲಿಮಿಟೆಡ್ ಅಡಳಿತ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು ಸತ್ಯಂ ಅಡಳಿತ ಮಂಡಳಿಗೆ ವರ್ಗಾವಣೆಯಾಗಿದ್ದಾರೆ.
ಹೈದ್ರಾಬಾದ್ ಮೂಲದ ಸತ್ಯಂ ಕಂಪ್ಯೂಟರ್ನ ಹೆಚ್ಚುವರಿ ಶೇರುಗಳನ್ನು ವೆಂಟುರ್ಬೇ ಕನ್ಸಲ್ಟಂಟ್ಸ್ ಪ್ರೈವೇಟ್ ಲಿಮಿಟೆಡ್ ಖರೀದಿಸಿದ ಹಿನ್ನೆಲೆಯಲ್ಲಿ ಮೂವರು ನಿರ್ದೇಶಕರನ್ನು ಸತ್ಯಂ ಅಡಳಿತ ಮಂಡಳಿಗೆ ಸೇರಿಸಲಾಗಿದೆ ಎಂದು ಟೆಕ್ ಮಹೀಂದ್ರಾ ಅಧಿಕಾರಿಗಳು ತಿಳಿಸಿದ್ದಾರೆ.
ವೆಂಟುರ್ಬೇ ಕನ್ಸಲ್ಟಂಟ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರ ನೇಮಕವನ್ನು ಟೆಕ್ ಮಹೀಂದ್ರಾ ಘೋಷಿಸಿದ್ದು, ಜೂನ್ 1 ರಿಂದ ಕಾರ್ಯಾರಂಭ ಮಾಡಲಿದ್ದಾರೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಟೆಕ್ ಮಹೀಂದ್ರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೀತ್ ನಯ್ಯರ್ ಅವರನ್ನು ಸತ್ಯಂ ಪೂರ್ಣಾವಧಿಯ ನಿರ್ದೇಶಕರಾಗಿ ಜೂನ್ 1ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಟೆಕ್ ಮಹೀಂದ್ರಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |