ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನಪಡೆದಿದೆ ಎಂದು ಸಮೀಕ್ಷಾ ಸಂಸ್ಥೆಯೊಂದು ಪ್ರಕಟಿಸಿದೆ.
ಜಾಗತಿಕ ಆರ್ಥಿಕ ಕುಸಿತ ಹಾಗೂ ವಹಿವಾಟಿನ ನೈತಿಕ ನೀತಿಗಳ ಕುರಿತಂತೆ ಹಲವು ರಾಷ್ಟ್ರಗಳ ಖ್ಯಾತ ಉದ್ಯಮಿಗಳ ಅಭಿಪ್ರಾಯ ಪಡೆದ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.
ಸರ್ವ್ಕಾರ್ಪೋರೇಶನ್ ಇಂಟರ್ನ್ಯಾಷನಲ್ ಬಿಜಿನೆಸ್ ಕಾನ್ಫಿಡೆನ್ಸ್ ಸರ್ವೆ ಸಂಸ್ಥೆ ಭಾರತ ನಂಬಿಕಸ್ತ ರಾಷ್ಟ್ರವಾಗಿದ್ದು, ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಲಬರುವ ಸಾಮರ್ಥ್ಯವಿರುವ ದೇಶಗಳಲ್ಲಿ ಮೂರನೇ ಸ್ಥಾನಪಡೆದಿದೆ ಎಂದು ವರದಿಯಲ್ಲಿ ತಿಳಿಸಿದೆ.
200 ಏಪ್ರಿಲ್ ತಿಂಗಳಲ್ಲಿ ಎರಡು ವಾರಗಳಿಗೂ ಅಧಿಕ ಸಮೀಕ್ಷಾ ಕಾರ್ಯವನ್ನು ನಡೆಸಿದ್ದು, ಪ್ರಸ್ತುತ ವಹಿವಾಟಿನ ಸಮಸ್ಯೆ ವಹಿವಾಟಿನ ನೈತಿಕತೆ ಜಾಗತಿಕ ಆರ್ಥಿಕ ಕುಸಿತ ಪಡಿಣಾಮ ಕುರಿತಂತೆ ಜಗತ್ತಿನ ಹಲವು ಉದ್ಯಮಿಗಳ ಅಭಿಪ್ರಾಯವನ್ನು ಸಂಗ್ರಹಿಸಿದಾಗ ಭಾರತಕ್ಕೆ ಮೂರನೇ ಸ್ಥಾನ ಲಭಿಸಿದೆ
ಜಾಗತಿಕ ಆರ್ಥಿಕ ಕುಸಿತದಿಂದ ಹೊರಬರುವ ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ಪಡೆದಿದ್ದು, ನಂತರದ ಸ್ಥಾನವನ್ನು ಚೀನಾ ಪಡೆದಿದೆ.
ಮೂರನೇ ಸ್ಥಾನಕ್ಕೆ ಭಾರತ ಮತ್ತು ಸಿಂಗಾಪೂರ್ , ನಾಲ್ಕನೇ ಸ್ಥಾನಕ್ಕೆ ಹಾಂಗ್ಕಾಂಗ್ ಮತ್ತು ಐದನೇ ಸ್ಥಾನಕ್ಕೆ ಕೆನಡಾ ದೇಶಗಳಿಗೆ ಕ್ರಮವಾಗಿ ಲಭಿಸಿದೆ.
|