ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಪೆಕ್ಟ್ರಂ ಹಂಚಿಕೆ ನೀತಿಗೆ ಹೈಕೋರ್ಟ್ ತರಾಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೆಕ್ಟ್ರಂ ಹಂಚಿಕೆ ನೀತಿಗೆ ಹೈಕೋರ್ಟ್ ತರಾಟೆ
ಸಿನಿಮಾ ಟಿಕೆಟ್‌ಗಳು ಮಾರಾಟ ಮಾಡಿದಂತೆ ಟೆಲಿಕಾಂ ಕ್ಷೇತ್ರದಲ್ಲಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಮೊದಲು ಬಂದವರಿಗೆ ಆದ್ಯತೆ ಎನ್ನುವ ಸರಕಾರದ ನೀತಿ ಅಕ್ಷಮ್ಯ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಸಂಚಾರ ಭವನದಲ್ಲಿ ಟೆಲಿಕಾಂ ಖಾತೆ ಸಚಿವ ಎ.ರಾಜಾ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಕೇವಲ ಒಂದು ದಿನದ ನಂತರ ನ್ಯಾಯಮೂರ್ತಿಗಳಾದ ಮುಕುಲ್ ಮುದ್ಗಲ್ ಮತ್ತು ವಾಲ್ಮಿಕಿ ಮೇಹತಾರಿದ್ದ ವಿಬಾಗೀಯ ಪೀಠ ಸರಕಾರದ ಟೆಲಿಕಾಂ ನೀತಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿತು.

ಸ್ಪೆಕ್ಟ್ರಂ ಹಂಚಿಕೆ ಕುರಿತಂತೆ ಸರಕಾರದ ನೀತಿಯನ್ನು ಪ್ರಶ್ನಿಸಿ ದಾಖಲಿಸಲಾದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ , ಸ್ಪೆಕ್ಟ್ರಂ ಹಂಚಿಕೆಯಲ್ಲಿ ತಾರತಮ್ಯವೆಸಗಿದ್ದಲ್ಲದೇ ಸಾರ್ವಜನಿಕ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟು ಮಾಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಎಷ್ಟು ಸ್ಪೆಕ್ಟ್ರಂಗಳನ್ನು ಹಂಚಿಕೆ ಮಾಡಿದೆ, ಉಳಿದ ಸ್ಪೆಕ್ಟ್ರಂಗಳೆಷ್ಟು? ಎಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ ತೃಪ್ತಿಕರ ಉತ್ತರ ನೀಡುವಲ್ಲಿ ವಿಫಲವಾದ ಟೆಲಿಕಾಂ ಇಲಾಖೆಯ ಧೋರಣೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಸಾರ್ವಜನಿಕ ಬೊಕ್ಕಸಕ್ಕೆ ಹಾನಿ ಎಸಗಿ, ಬೆಲೆಬಾಳುವ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿರುವುದು ಸರಿಯಲ್ಲ. ನಮಗೆ ಸರಕಾರದ ನೀತಿಗಳ ಬಗ್ಗೆ ದಿಗ್ಭ್ರಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡೆಲ್‌ಗೆ 290 ಮಿಲಿಯನ್ ಡಾಲರ್ ಲಾಭ
ಮುಂಬರುವ ಬಜೆಟ್‌ನಲ್ಲಿ ರಫ್ತುದಾರರಿಗೆ ರಿಯಾಯಿತಿ:ಶರ್ಮಾ
ಜೂನ್ ತಿಂಗಳಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಜೂನ್ 10 ರಂದು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಪ್ರಣಬ್ ಭೇಟಿ
ಸತ್ಯಂ ಹಗರಣ: ತ್ವರಿತ ವಿಚಾರಣೆ
ಸಾಲದ ಬಡ್ಡಿದರ ಕಡಿತ: ಎಸ್‌ಬಿಐ