ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜವಳಿ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗಗಳ ಸೃಷ್ಟಿ: ಮಾರನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜವಳಿ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗಗಳ ಸೃಷ್ಟಿ: ಮಾರನ್
ಕೇಂದ್ರದ ಯುಪಿಎ ಸರಕಾರ ಮುಂದಿನ ಐದು ವರ್ಷಗಳ ಅವಧಿಯಲ್ಲಿ 1 ಕೋಟಿ ಹುದ್ದೆಗಳನ್ನು ಸೃಷ್ಟಿಸಲಿದ್ದು, 1.55 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ನೂತನವಾಗಿ ಅಧಿಕಾರ ಸ್ವೀಕರಿಸಿದ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಹೇಳಿದ್ದಾರೆ.

ಮಾರನ್ ಹಿಂದಿನ ಸರಕಾರದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಡಿಎಂಕೆಯ ಒಳಜಗಳದಿಂದಾಗಿ ಅವಧಿ ಪೂರ್ಣಗೊಳ್ಳುವ ಮುನ್ನ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆದರೆ ಪ್ರಸಕ್ತ ಸರಕಾರದಲ್ಲಿ ಐದು ವರ್ಷಗಳ ಅವಧಿಯವರೆಗೆ ಸಚಿವರಾಗಿರುವುದಾಗಿ ತಿಳಿಸಿದ್ದಾರೆ .

ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು ನನ್ನ ಉದ್ದೇಶವಾಗಿದೆ . ಈ ಬಾರಿ ಐದು ವರ್ಷಗಳ ಅಧಿಕಾರವಧಿಯನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಮಾರನ್ ಹೇಳಿದ್ದಾರೆ .

ವಾರ್ಷಿಕವಾಗಿ 52 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಜವಳಿ ಕ್ಷೇತ್ರವನ್ನು ಪ್ರಸಕ್ತ ವರ್ಷಾಂತ್ಯಕ್ಕೆ ಶೇ.8 ರಿಂದ ಶೇ.10 ರಷ್ಟು ಅಭಿವೃದ್ಧಿ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ನುಡಿದರು .

ಕೃಷಿ ಕ್ಷೇತ್ರದ ನಂತರ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಜವಳಿ ಕ್ಷೇತ್ರ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಫ್ತುವಹಿವಾಟಿನಲ್ಲಿ ಕುಸಿತ ಕಂಡಿದೆ ಎಂದು ಮಾರನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಜವಳಿ ಕ್ಷೇತ್ರ ಬಲಪಡಿಸುವ ಗುರಿ: ಮಾರನ್
ಕಾಫಿ ರಫ್ತು ಶೇ.19ರಷ್ಟು ಕುಸಿತ
ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಕುಸಿತ
ಏರ್‌ ಇಂಡಿಯಾ: ಗುತ್ತಿಗೆ ನೌಕರರಿಂದ ಮುಷ್ಕರ