ಈ ಬಸ್ಗೆ ಡೀಸೆಲ್ ಬೇಡ, ಪೆಟ್ರೋಲ್ ಕೂಡ ಬೇಡ. ಇದು ಸಂಪೂರ್ಣ ರೈತ ಸ್ನೇಹಿ ಬಸ್. ಎಥೆನಾಲ್ ಬಳಸಿದರೆ ಸಾಕು, ಈ ಬಸ್ ಸರಾಗವಾಗಿ ಚಲಿಸುತ್ತದೆ.
ಸಾರಿಗೆ ಸಚಿವ ಅಶೋಕ್ ನೇತೃತ್ವದಲ್ಲಿ ನಗರದಲ್ಲಿ ಈ ವಿನೂತನ ಪ್ರಯೋಗ ಜಾರಿಗೆ ಬಂದಿದೆ. ಸಕ್ಕರೆ ಕಾರ್ಖಾನೆಗಳಲ್ಲಿನ ಉಪ ಉತ್ಪನ್ನ ಎಥೆನಾಲ್ ಈ ಬಸ್ಸಿನ ಪ್ರಮುಖ ಇಂಧನ.
ಎಥೆನಾಲ್ ಒಂದು ಜೈವಿಕ ಇಂಧನ. ಇದು ರಾಷ್ಟ್ರದಲ್ಲೇ ಮೊದಲ ಪ್ರಯೋಗ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ಇದು ಪರಿಸರ ಸ್ನೇಹಿಯಾಗಿರುವುದಲ್ಲದೆ, ಕೃಷಿಕರಿಗೆ ವರದಾನವಾಗಲಿದೆ ಎಂದು ಅಶೋಕ್ ವಿವರಿಸಿದ್ದಾರೆ.
ಈ ಜೈವಿಕ ಇಂಧನದಲ್ಲಿ ಶೇ 70 ಎಥೆನಾಲ್, ಶೇ 30 ಖನಿಜಾಂಶ ರಹಿತ ನೀರಿನ ಬಳಕೆಯಿಂದ ಬಸ್ ಸಂಚರಿಸಲು ಸಾಧ್ಯ. ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯದ ಈ ಬಸ್ಗೆ ರೈತ ಬಂಧು ಎಂದೇ ಸರ್ಕಾರ ನಾಮಕರಣಗೊಳಿಸಿರುವುದು ವಿಶೇಷ. ಮುಂದಿನ ದಿನಗಳಲ್ಲಿ 5000 ಸಾವಿರ ಜೈವಿಕ ಇಂಧನದ ಬಸ್ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದು ಅವರು ಹೇಳಿದರು.
|