ಭಾರತದ ಮೂಲಕ್ಷೇತ್ರವೊಂದರಲ್ಲಿಯೇ ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ 750 ಬಿಲಿಯನ್ ಡಾಲರ್ಗಳ ಅಗತ್ಯವಿದ್ದು ಅದರಲ್ಲಿ ಶೇ.75ರಷ್ಟು ಹಣ ವಿದೇಶಿ ಹೂಡಿಕೆದಾರರಿಂದ ಬರುವ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರಿಗೆ ಭಾರತ ಸುರಕ್ಷಿತ ಬಂದರಾಗಿದೆ ಎಂದು ಐಸಿಸಿ ಬ್ಯಾಂಕ್ ಮುಖ್ಯಸ್ಥ ಕೆ.ವಿ.ಕಾಮತ್ ಬಣ್ಣಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದ ನಂತರ ಹೂಡಿಕೆದಾರರು ಹೂಡಿಕೆಗಳಿಗಾಗಿ ಇತರ ಸುರತ್ರಿತ ದೇಶಗಳತ್ತ ಗಮನಹರಿಸಲು ಆರಂಭಿಸಿದ್ದು, ಜಾಗತಿಕವಾಗಿ ಕೆಲ ಸುರಕ್ಷಿತ ಹೂಡಿಕೆ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಕಾಮತ್ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯು ಗೌರವಯುತ ಆರ್ಥಿಕತೆಯನ್ನು ಕಂಡು ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಜಾಗತಿಕ ಆರ್ಥಿಕ ಸಂಸ್ಥೆಗಳು ಭಾರತವನ್ನು ಸುರಕ್ಷಿತ ತಾಣವೆಂದು ಪರಿಗಣಿಸಿವೆ ಎಂದು ತಿಳಿಸಿದ್ದಾರೆ
ಭಾರತದ ನಂತರ ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳು ಮಾತ್ರ ಸುರಕ್ಷಿತ ಹೂಡಿಕೆ ತಾಣಗಳಾಗಿವೆ. ಇತರ ರಾಷ್ಟ್ರಗಳು ಹೂಡಿಕೆಗಳಿಗೆ ಅಸುರಕ್ಷಿತ ತಾಣಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. |