ಜಾಗತಿಕ ಆರ್ಥಿಕ ಸುಧಾರಣೆ ಅನಿಶ್ಚಿತತೆಯಲ್ಲಿದ್ದ ಹೊರತಾಗಿಯೂ ಭಾರತವು ಶೇಕಡಾ 8ರಿಂದ 9ರಷ್ಟು ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಪ್ರಗತಿ ದರವನ್ನು ಸಾಧಿಸಲು ಸಾಧ್ಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಭಾರತವು ಪ್ರಸಕ್ತ ಸಮಸ್ಯೆಯಿಂದ ಹೊರ ಬರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರಾದರೂ ಕ್ರಮಿಸುವ ಹಾದಿಯು ತೀರಾ ಕಠಿಣವಾಗಿದೆ ಎಂಬುದನ್ನು ಒಪ್ಪಿಕೊಂಡರು.
"ಪ್ರಗತಿ ಹೇಳಿದಷ್ಟು ಸುಲಭವಲ್ಲ. ಆದರೆ ಬಂಡವಾಳದ ಅನುಪಾತ 4:1ರೊಂದಿಗೆ ಗರಿಷ್ಠ ಶೇಕಡಾ 35ನ್ನು ಹೊಂದಿರುವುದರಿಂದ ಭಾರತದ ಉಳಿತಾಯ ದರವು ನನಗೆ ಸಮಾಧಾನ ತಂದಿದೆ. ಇದನ್ನು ಉಳಿಸಿಕೊಳ್ಳಲು ನಾವು ಸಮರ್ಥರಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಕಷ್ಟಗಳಿದ್ದರೂ ಸ್ವಲ್ಪ ಹೆಚ್ಚಿನ ಶ್ರಮವಹಿಸಿದರೆ ನಾವು ಶೇಕಡಾ 8ರಿಂದ 9ರಷ್ಟು ಪ್ರಗತಿ ದರ ದಾಖಲಿಸಬಹುದಾಗಿದೆ" ಎಂದು ಇಟಲಿಯ ನಾಲ್ಕು ದಿನಗಳ ಭೇಟಿ ಮುಗಿಸಿ ವಾಪಸು ಬರುವಾಗ ಸಿಂಗ್ ತಿಳಿಸಿದ್ದಾರೆ.
ವಿಶ್ವದ ಬೆನ್ನೆಲುಬುಗಳ ಹಿಂಜರಿತದಿಂದ ಸುಧಾರಿಸಿಕೊಳ್ಳುವ ಪ್ರಯತ್ನಕ್ಕೆ ಅಭಿವೃದ್ಧಿಶೀಲ ಜಗತ್ತಿನ ಕೇಂದ್ರದಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಜಿ-8 ಮತ್ತು ಜಿ-5, ಈಜಿಪ್ಟ್ ಮತ್ತು ಆಫ್ರಿಕನ್ ರಾಷ್ಟ್ರಗಳೊಡನೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
|