ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾವೇರಿ ಗೋದಾವರಿ ಸರಕಾರದ ಸ್ವತ್ತು: ದಿಯೋರಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾವೇರಿ ಗೋದಾವರಿ ಸರಕಾರದ ಸ್ವತ್ತು: ದಿಯೋರಾ
ಕಾವೇರಿ ಗೋದಾವರಿ ನೈಸರ್ಗಿಕ ಅನಿಲವು ಸರಕಾರಕ್ಕೆ ಸೇರಿದ್ದೇ ಹೊರತು ಅನಿಲ್ ಅಂಬಾನಿ ಸಹೋದರರಿಗಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ ಭಾನುವಾರ ಪುನರುಚ್ಛರಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಇಂಧನ ಸಚಿವರು, ಕಾವೇರಿ ಗೋದಾವರಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ ಎಂದರು.

"ಸರಕಾರವು ಅದರಲ್ಲಿ ಸಾಕಷ್ಟು ಹಕ್ಕನ್ನು ಹೊಂದಿದೆ. ನೈಸರ್ಗಿಕ ಅನಿಲವು ಮುಖೇಶ್ ಅಥವಾ ಅನಿಲ್ ಅಂಬಾನಿಯವರಿಗೆ ಸೇರಿದುದಲ್ಲ. ಗ್ಯಾಸ್ ಸರಕಾರಕ್ಕೆ ಸೇರಿದ್ದು" ಎಂದು ಅವರು ತಿಳಿಸಿದ್ದಾರೆ.

ಅನಿಲ್ ಅಂಬಾನಿಯವರ ಆರ್‌ಎನ್‌ಆರ್‌ಎಲ್‌ ಕಂಪನಿಗೆ ಎಂಎಂಬಿಟಿಯು ಒಂದಕ್ಕೆ 2.34 ಅಮೆರಿಕನ್ ಡಾಲರ್‌ನಂತೆ ಅನಿಲ ಪೂರೈಕೆ ಮಾಡಲು ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮುಖೇಶ್ ಅಂಬಾನಿಯವರ ಆರ್‌ಐಎಲ್ ಸುಪ್ರೀಂ ಕೋರ್ಟ್ ಮೊರೆ ಹೋದ ಬೆನ್ನಿಗೆ ಅನಿಲ್ ಕೂಡ ಸುಪ್ರೀಂ ಮೆಟ್ಟಿಲು ಹತ್ತಿದ್ದಾರೆ. ಪ್ರಕರಣದ ವಿಚಾರಣೆ ಜುಲೈ 20ರಂದು ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜವಳಿ ರಫ್ತುವಿನಲ್ಲಿ ಶೇ.14ರಷ್ಟು ಇಳಿಕೆ
ದೇಶದಲ್ಲಿ ಸಿಂಗಾಪುರ ಅತ್ಯಧಿಕ ಬಂಡವಾಳ ಹೂಡಿಕೆ
ಐಸಿಐಸಿಐಯಿಂದ ಬೆಳೆ ವಿಮೆ ಯೋಜನೆ
ಗೊಬ್ಬರದ ಅಭಾವ: ಕೇಂದ್ರ
ಮ‌ೂಲಸೌಕರ್ಯ ಮೇಲ್ವಿಚಾರಣೆಗೆ ಸಮಿತಿ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ: ಸಿನ್ಹಾ ಆರೋಪ