ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಂಗಾಲದಲ್ಲಿ ಅತ್ಯಗತ್ಯ ವಸ್ತುಗಳ ಸಾಲಿಗೆ ಆಲೂಗಡ್ಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಗಾಲದಲ್ಲಿ ಅತ್ಯಗತ್ಯ ವಸ್ತುಗಳ ಸಾಲಿಗೆ ಆಲೂಗಡ್ಡೆ
ಅಕ್ರಮ ದಾಸ್ತಾನು ಮಾಡುವುದನ್ನು ತಪ್ಪಿಸುವ ಸಲುವಾಗಿ ಪಶ್ಚಿಮ ಬಂಗಾಲ ಸರಕಾರವು ಆಲೂಗಡ್ಡೆಯನ್ನು ಅತ್ಯಗತ್ಯ ವಸ್ತುಗಳ ಸಾಲಿಗೆ ಸೇರಿಸಿ ಆದೇಶ ಹೊರಡಿಸಿದೆ.

ಇದರಿಂದಾಗಿ ಆಲೂಗಡ್ಡೆ ದರವನ್ನು ಸ್ಥಿರವಾಗಿ ಉಳಿಸುವ ಸಲುವಾಗಿ ದಿಟ್ಟ ನಿರ್ಧಾರವೊಂದನ್ನು ಸರಕಾರ ಕೈಗೊಂಡಿದ್ದು, ನಿಗದಿತ ಮಟ್ಟಕ್ಕಿಂತ ಹೆಚ್ಚು ಆಲೂಗಡ್ಡೆಯನ್ನು ದಾಸ್ತಾನು ಮಾಡುವುದನ್ನು ತಪ್ಪಿಸಿದಂತಾಗಿದೆ.

ಇನ್ನು ಮುಂದೆ ಸರಕಾರ ಅನುಮತಿ ನೀಡಿದಷ್ಟು ಮಾತ್ರ ಆಲೂಗಡ್ಡೆ ದಾಸ್ತಾನು ಮಾಡಲು ಅವಕಾಶವಿದೆ ಮತ್ತು ಸರಕಾರವು ಗೋಡೌನ್‌ಗಳನ್ನು ಪರಿಶೀಲನೆ ನಡೆಸಬಹುದಾಗಿದೆ.

ರಾಜ್ಯದ ಕೆಲವು ನಗರಗಳ ಮಾರುಕಟ್ಟೆಗಳಲ್ಲಿ 13 ರೂಪಾಯಿಗಳಿಗೆ ಒಂದು ಕಿಲೋ ಆಲೂಗಡ್ಡೆಯನ್ನು ಮಾರಾಟ ಮಾಡಿದ ಒಂದು ವಾರದ ನಂತರ ಸರಕಾರ ಈ ತೀರ್ಮಾನವನ್ನು ತೆಗೆದುಕೊಂಡಿದೆ.

ಈ ನಿಯಮದ ಪ್ರಕಾರ ಸಗಟು ಮಾರಾಟಗಾರರು 400 ಕ್ವಿಂಟಾಲ್‌ ಹಾಗೂ ಚಿಲ್ಲರೆ ಮಾರಾಟಗಾರರು 30 ಕ್ವಿಂಟಾಲ್ ಆಲೂಗಡ್ಡೆಯನ್ನು ಮಾತ್ರ ಶೇಖರಿಸಿಡಬಹುದಾಗಿದೆ.

ಕೊಲ್ಕತ್ತಾ ಪೊಲೀಸ್ ಅಧೀಕ್ಷಕರು ಎಲ್ಲಾ ಆಲೂಗಡ್ಡೆ ಸಗಟು ಮಾರಾಟಗಾರರಿಗೆ ಸರಕಾರದ ಆದೇಶವನ್ನು ತಲುಪಿಸಲಿದ್ದಾರೆ ಎಂದು ರಾಜ್ಯದ ಹಣಕಾಸು ಸಚಿವ ಆಸಿಮ್ ದಾಸ್‌ಗುಪ್ತಾ ತಿಳಿಸಿದ್ದಾರೆ. ಜಿಲ್ಲೆಗಳಲ್ಲಿ ಜಿಲ್ಲಾ ಅಧೀಕ್ಷಕರು ಈ ಕೆಲಸವನ್ನು ಮಾಡಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತತ ಮೂರನೇ ದಿನವೂ ದುಬಾರಿಯಾದ ಚಿನ್ನ
ಹಂದಿಜ್ವರ ಭೀತಿ; ಹೈದರಾಬಾದ್ ಗೂಗಲ್ ಕಚೇರಿ ಬಂದ್
ಇಂದ್ರಾ ನೂಯಿಗೆ ವರ್ಷದ ಸಿಇಓ ಬಿರುದು
ಉಚಿತ ವೆಬ್ 'ಆಫೀಸ್' ನೀಡಲಿರುವ ಮೈಕ್ರೋಸಾಫ್ಟ್
ಇನ್ನು ಕಾರುಗಳೂ ಪರಸ್ಪರ ಮಾತನಾಡ್ತವಂತೆ..!
ಆರು ತಿಂಗಳಲ್ಲಿ ಬಡ್ಡಿ ದರ ಏರಿಕೆ ಸಾಧ್ಯತೆ: ಎಸ್‌ಬಿಐ