ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಬ್ಬಿಣ ಅದಿರು ರಫ್ತಿಗೆ ನಿರ್ಬಂಧವಿಲ್ಲ: ಕೇಂದ್ರ ಸರಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಬ್ಬಿಣ ಅದಿರು ರಫ್ತಿಗೆ ನಿರ್ಬಂಧವಿಲ್ಲ: ಕೇಂದ್ರ ಸರಕಾರ
ರಫ್ತು ಮಾಡಿದ ನಂತರವೂ ದೇಶದಲ್ಲಿ ಸಾಕಷ್ಟು ಖನಿಜ ಉಳಿಯುವುದರಿಂದ ಕಬ್ಬಿಣದ ಅದಿರು ರಫ್ತಿಗೆ ಯಾವುದೇ ನಿರ್ಬಂಧ ವಿಧಿಸಲಾಗುವುದಿಲ್ಲ ಎಂದು ಸರಕಾರ ತಿಳಿಸಿದೆ.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತಾ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಈ ವಿಚಾರ ತಿಳಿಸಿದ್ದಾರೆ.

ಪ್ರಮುಖ ಖನಿಜಗಳಾದ ಕಬ್ಬಿಣದ ಅದಿರು, ಮ್ಯಾಗನೀಸ್ ಅದಿರು ಮತ್ತು ಕ್ರೋಮಿಯಂ ಅದಿರು ರಫ್ತಿನ ಮೇಲೆ ನಿರ್ಬಂಧ ವಿಧಿಸಬೇಕು ಎಂಬ ಬೇಡಿಕೆ ಆಗಾಗ ಕೇಳಿ ಬರುತ್ತಿದೆ ಎಂದು ಸಚಿವರು ಮಾತಿಗಾರಂಭಿಸಿದರು.

ಪ್ರಮಾಣಾತ್ಮಕ ಮತ್ತು ಗುಣಾತ್ಮಕ ನಿರ್ಬಂಧಗಳು ಮ್ಯಾಂಗನೀಸ್ ಮತ್ತು ಕ್ರೋಮ್ ಅದಿರುಗಳ ರಫ್ತುಗಳ ಮೇಲೆ ಈಗಾಗಲೇ ಇದೆ. ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ ಶೇಕಡಾ 64ಕ್ಕಿಂತಲೂ ಕಬ್ಬಿಣ ವಸ್ತುಗಳ ಅದಿರಿನ ತುಂಡುಗಳು ಮತ್ತು ಕಣಗಳಿದ್ದಲ್ಲಿ ರಫ್ತಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರದ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರವು ಯಾವುದೇ ರೀತಿಯ ರಿಯಾಯಿತಿ ತೋರಿಸುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿರುವ ಶರ್ಮಾ, "ಉತ್ಕೃಷ್ಟ ಅದಿರನ್ನು ರಕ್ಷಿಸುವ ನಿಟ್ಟಿನಲ್ಲಿ ಬೈಲಾದಿಲಾ ಕಬ್ಬಿಣದ ಅದಿರಿಗೆ ಪ್ರಮಾಣಾತ್ಮಕ ನಿರ್ಬಂಧಗಳಿವೆ. ಶೇಕಡಾ 64ಕ್ಕಿಂತಲೂ ಕಡಿಮೆ ಕಬ್ಬಿಣದ ಅದಿರಿನ ತುಂಡುಗಳು ಮತ್ತು ಕಣಗಳಿರುವ ಕಬ್ಬಿಣದ ಅದಿರನ್ನು ರಫ್ತು ಮಾಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ" ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಇಂಡಿಯಾ ಜೆಪಿಸಿ ತನಿಖೆ ನಡೆಸಿ: ಶತ್ರುಘ್ನ ಸಿನ್ಹಾ
65 ಡಾಲರ್‌ಗೆ ಹತ್ತಿರವಾಗುತ್ತಿರುವ ಕಚ್ಚಾ ತೈಲ
ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!
ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ
ಕಚ್ಚಾ ಸಕ್ಕರೆ ಅಮುದಿಗೆ ಕೇಂದ್ರ ಅಸ್ತು
ಉತ್ತೇಜನ ಪ್ಯಾಕೇಜ್‌ಗಳ ಕೊಡುಗೆಯಿಲ್ಲ :ಮೊಂಟೆಕ್