ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸತ್ಯಂ ಪ್ರಕರಣ ವಿಚಾರಣೆ ಹಂತದಲ್ಲಿ:ಸೆಬಿ (satyam computer sebi ramalinga raju)
Bookmark and Share Feedback Print
 
ದೇಶ ಕಂಡ ಬೃಹತ್ ಬಹುಕೋಟಿ ಹಗರಣದ ರೂವಾರಿಯಾದ ರಾಮಲಿಂಗಾ ರಾಜು ವಿರುದ್ಧದ ಎರಡು ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ಪ್ರಕಟಿಸಿದೆ.

ಸತ್ಯಂ ಕಂಪ್ಯೂಟರ್ ಸರ್ವಿಸಸ್‌ನ ಲೆಕ್ಕಪರಿಶೋಧಕ ಸಂಸ್ಥೆಯಾದ ಪ್ರೈಸ್‌ವಾಟರ್ ಹೌಸ್‌ನ ಲೆಕ್ಕ ಪರಿಶೋಧಕರಿಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿಯ ಮುಖ್ಯಸ್ಥ ಸಿಬಿ.ಭಾವೆ ತಿಳಿಸಿದ್ದಾರೆ.

ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ನಾಲ್ಕು ಲೆಕ್ಕಪರಿಶೋಧಕ ಕಂಪೆನಿಗಳ ವಿರುದ್ಧ ಚಾರ್ಟರ್ಡ್ ಅಕೌಂಟೆಟ್ಸ್ ಸಮಿತಿ ಶಿಸ್ತುಕ್ರಮಕ್ಕೆ ಶಿಫಾರುಸು ಮಾಡಿದೆ ಎಂದು ಭಾವೆ ತಿಳಿಸಿದ್ದಾರೆ.

ಸತ್ಯಂ ಸಂಸ್ಥಾಪಕ ರಾಲಿಂಗಾರಾಜು ಕಂಪೆನಿಯ ಆರ್ಥಿಕ ದಾಖಲಾತಿಗಳನ್ನು ತಿದ್ದಿರುವುದಾಗಿ ಒಪ್ಪಿಕೊಂಡ ನಂತರ, ಕಾರ್ಪೋರೇಟ್ ವಲಯದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯಂ, ಪ್ರಕರಣ, ವಿಚಾರಣೆ ಸೆಬಿ