ಅಹಾರ ದರಗಳ ಏರಿಕೆಗೆ ಕಾರಣವಾದ ಸಕ್ಕರೆ ದರವನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ.
ಸಕ್ಕರೆ ದರ ಏರಿಕೆಯಿಂದಾಗಿ ಆರ್ಥಿಕ ನೀತಿಗಳು ವೈಫಲ್ಯ ಕಂಡಿದೆ. ಉತ್ಪನ್ನ ಕೊರತೆಯಿಂದಾಗಿ ಸಕ್ಕರೆ ದರವನ್ನು ನಿಯಂತ್ರಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಪ್ರಧಾನಿ ರಾಜ್ಯಸಭೆಗೆ ತಿಳಿಸಿದ್ದಾರೆ.
ನಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳುತ್ತೇವೆ.ಸಕ್ಕರೆ ದರವನ್ನು ನಿಯಂತ್ರಿಸಲು ಬೇರಿ ದಾರಿಗಳು ಗೋಚರಿಸುತ್ತಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಸಕ್ಕರೆ ದರದಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಕೇಂದ್ರ ಅಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ಹೇಳಿಕೆ ನೀಡಿದ ನಂತರ, ಪ್ರಧಾನಿ ಹೇಳಿಕೆ ಹೊರಬಿದ್ದಿದೆ.