ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಉತ್ತರಖಂಡ್‌ನಲ್ಲಿ ಹೂಡಿಕೆಗೆ ಹಿಂದುಜಾ ಸಹೋದರರ ಆಸಕ್ತಿ (Hinduja brothers | Ramesh Pokhriyal Nishank | Chief Minister)
Bookmark and Share Feedback Print
 
ಉತ್ತರಖಂಡದಲ್ಲಿ ಆರೋಗ್ಯ, ವಿದ್ಯುತ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ಹೊಂದಿರುವುದಾಗಿ ಖ್ಯಾತ ಉದ್ಯಮಿಗಳಾದ ಹಿಂದುಜಾ ಸಹೋದರರು ಮುಖ್ಯಮಂತ್ರಿ ರಮೇಶ್ ಪೊಕ್ರಿಯಾಲ್ ನಿಶಾಂಕ್‌ಗೆ ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಹಿಂದುಜಾ ಸಹೋದರರಾದ ಶೀಚಂದ್, ಅಶೋಕ್ ಗೋಪಿಚಂದ್ ಮತ್ತು ಪ್ರಕಾಶ್ ಮುಖ್ಯಮಂತ್ರಿಯವರನ್ನು ಕಳೆದ ರಾತ್ರಿ ಭೇಟಿ ಮಾಡಿ, ಹಲವು ಯೋಜನೆಗಳು ಹಾಗೂ ಇತರ ಸಮಸ್ಯೆಗಳ ಕುರಿತಂತೆ ಚರ್ಚಿಸಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಲು ಸಿದ್ಧರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಖಂಡದಲ್ಲಿರುವ ಹಿಂದುಜಾ ಸಹೋದರರ ಮಾಲೀಕತ್ವದ ಅಶೋಕ್ ಲೆಲ್ಯಾಂಡ್‌ ಕಂಪೆನಿ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಬಯಸುತ್ತಿರುವುದಾಗಿ ಹಿಂದುಜಾ ಸಹೋದರರು ತಿಳಿಸಿದ್ದಾರೆ.

ಸರಕಾರದ ಯೋಜನೆಯಾದ ಆಯುರ್ವೆದಿಕ ವ್ಯವಸ್ಥೆಗೆ ನೂತನ ಆಯಾಮ ನೀಡಲಿರುವ ಆಯುಷ್ ಗ್ರಾಮ್ ಪ್ರೋಗ್ರಾಂ ಯೋಜನೆ ಯಶಸ್ವಿಯಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ಹೊಂದಿರುವುದಾಗಿ ಹಿಂದುಜಾ ಸಹೋದರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ