ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಣಬ್ ಮುಖರ್ಜಿ ಚಾಣಾಕ್ಷ ರಾಜಕಾರಣಿ:ನಾರಾಯಣನ್ (Pranab Mukherjee| Finance Minister | M K Narayanan | Raj Bhavan)
Bookmark and Share Feedback Print
 
ಕಠಿಣ ಪರಿಸ್ಥಿತಿಗಳಲ್ಲಿ ಚಾಣಾಕ್ಷತನದಿಂದ ನಿರ್ವಹಿಸುವ ವಿತ್ತಸಚಿವ ಪ್ರಣಬ್ ಮುಖರ್ಜಿ ಅವರ ಕಾರ್ಯ ವೈಖರಿ ಶ್ಲಾಘನಿಯ.ಅವರು ವಿತ್ತ ಸಚಿವರಾಗದಿದ್ದಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಸಚಿವ ಸಂಪುಟ ವಿಪತ್ತಿನಲ್ಲಿ ಸಿಲುಕುತ್ತಿತ್ತು ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲರು ಹೇಳಿದ್ದಾರೆ.

ಮುಖರ್ಜಿ ಕೇವಲ ಸಚಿವ ಸಂಪುಟದ ಸದಸ್ಯರಲ್ಲ. ಆವರೊಬ್ಬ ಅನುಭವಿ, ಚಾಣಾಕ್ಷ ರಾಜಕಾರಣಿ. ಅವರ ಹೊರತಾಗಿ, ಸಂಪುಟ ವ್ಯವಸ್ಥೆ ಗಂಡಾಂತರಕ್ಕೆ ಸಿಲುಕುತ್ತಿತ್ತು ಎಂದು ರಾಜಭವನದಲ್ಲಿ ಆಯೋಜಿಸಲಾದ ಸಭೆಯೊಂದರಲ್ಲಿ ರಾಜ್ಯಪಾಲ ಎಂ.ಕೆ. ನಾರಾಯಣನ್‌ ತಿಳಿಸಿದ್ದಾರೆ.

ಪ್ರಣಬ್ ಮುಖರ್ಜಿ ಅವರ ಹೊರತಾಗಿ, ಮೃದು ಭಾಷಿಗ ಪ್ರದಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ, ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಪ್ರಣಬ್ ಮುಖರ್ಜಿ ಸಚಿವ ಸಂಪುಟದ ರೈಸಿಂಗ್ ಸ್ಟಾರ್‌ ಆಗಿದ್ದಾರೆ. ವಿದೇಶಾಂಗ ನೀತಿಗಳಲ್ಲಿ ಪ್ರಮುಖವಾದ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ನಿಭಾಯಿಸಿರುವ ಮುಖರ್ಜಿಯವರೊಂದಿಗೆ ತಾವು ಕಾರ್ಯನಿರ್ವಹಿಸಿರುವುದು ಸಂತಸ ತಂದಿದೆ ಎಂದು ಮಾಜಿ ರಾಷ್ಟ್ರೀಯ ಭಧ್ರತಾ ಸಲಹೆಗಾರ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲ ನಾರಾಯಣನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ