ಸಕ್ಕರೆ ಮತ್ತು ಬೇಳೆಕಾಳುಗಳ ಬೆಲೆ ಇಳಿಕೆ ಕಂಡಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ತಿಳಿಸಿದ್ದು, ಗೋಧಿ ಹಾಗೂ ಖಾದ್ಯ ತೈಲಗಳ ಬೆಲೆ ಏಕಪ್ರಕಾರವಾಗಿ ಮುಂದುವರಿದಿದೆ ಎಂದು ಹೇಳಿದೆ.
ದೆಹಲಿ, ಜಮ್ಮು, ಡೆಹ್ರಾಡೂನ್, ಮುಂಬೈ, ಅಹಮ್ಮದಾಬಾದ್, ರಾಯ್ಪುರ್, ಜೈಪುರ್, ಕೋಲ್ಕತಾ, ಭುವನೇಶ್ವರ್ ಹಾಗೂ ಚೆನ್ನೈ ನಗರಗಳಲ್ಲಿ ಸಕ್ಕರೆ ಬೆಲೆ ಇಳಿಕೆ ಕಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅದೇ ರೀತಿ ಬೇಳೆಕಾಳುಗಳ ಬೆಲೆ ಕೂಡ ದೆಹಲಿ, ಕೋಲ್ಕತಾ,ಚೆನ್ನೈ, ಬೆಂಗಳೂರು, ಭುವನೇಶ್ವರ್ ಮತ್ತು ಹರಿಯಾಣಗಳಲ್ಲಿ ಇಳಿಕೆ ಕಂಡಿದೆ. ಉದ್ದು, ಮಸೂರ್ ದಾಲ್ ಬೆಲೆ ಕೆಲವು ನಗರಗಳಲ್ಲಿ ಯಥಾಸ್ಥಿತಿಯಲ್ಲಿದೆ. ಅಲ್ಲದೇ ಗೋಧಿ, ಖಾದ್ಯ ತೈಲ, ವನಸ್ಪತಿ ಮತ್ತು ತರಕಾರಿಗಳ ಬೆಲೆ ಹೆಚ್ಚಿನ ನಗರಗಳಲ್ಲಿ ಏಕಪ್ರಕಾರವಾಗಿಯೇ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.