ಹವಾಮಾನ ವೈಪರೀತ್ಯ, ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಕೇಂದ್ರ ವಾಣಿಜ್ಯ ಸಚಿವ ಕಮಲ್ನಾಥ್ 2008ರಲ್ಲಿ 500ಕೋಟಿ ರೂ.ವಿಶೇಷ ಕಾಫಿ ಸಾಲ ಮನ್ನ ಘೋಷಣೆ ಮಾಡಿದ್ದು, ಅದರ ಅನುಷ್ಠಾನ ಮುಂದೂಡುತ್ತಿರುವುದರಿಂದ ಕಾಫಿ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ ಎಂದು ಕಾಫಿ ಬೆಳೆಗಾರರ ಸಂಘ ತಿಳಿಸಿದೆ.