ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸತ್ಯಂ:ರಾಜು ಜಾಮೀನು ತಿರಸ್ಕರಿಸಿದ ಅಪೆಕ್ಸ್ ನ್ಯಾಯಾಲಯ (Satyam|Ramalinga Raju|SC|bail plea)
Bookmark and Share Feedback Print
 
ಬಹುಕೋಟಿ ಹಗರಣದ ರೂವಾರಿ ಹಾಗೂ ಸತ್ಯಂ ಕಂಪ್ಯೂಟರ್‌ ಸರ್ವಿಸಸ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರಾಮಲಿಂಗಾರಾಜು ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಗಂಭೀರ ಅಪರಾಧಗಳನ್ನು ಎಸಗುವ ಆರೋಪಿಗಳು ಜೈಲಿನಲ್ಲಿರಬೇಕು ಎಂದು ಅಪೆಕ್ಸ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಕಟುವಾಗಿ ಹೇಳಿದ್ದಾರೆ.

ಸತ್ಯಂ ಕಂಪ್ಯೂಟರ್‌ ಸರ್ವಿಸಸ್‌ ಕಂಪೆನಿಯ, ಬ್ಯಾಂಕ್ ದಾಖಲೆಗಳನ್ನು ತಿರುಚಿ ಆರ್ಥಿಕ ವಂಚನೆ ಎಸಗಿರುವುದಾಗಿ ರಾಮಲಿಂಗಂ ಒಪ್ಪಿಕೊಂಡ ನಂತರ ಕಾರ್ಪೋರೇಟ್ ವಲಯದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಕೇಂದ್ರದ ಗಂಭೀರ ಅಪರಾಧ ಪತ್ತೆ ದಳ, ಆರೋಪಿ ರಾಮಲಿಂಗಂ ವಿರುದ್ಧದ ಆರೋಪಗಳ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಇನ್ನೂ ವಿಚಾರಣೆಯ ಹಂತದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ