ದೇಶದಲ್ಲಿ ಹಣದುಬ್ಬರ ದರ ಗರಿಷ್ಠ ಏರಿಕೆಯನ್ನು ಕಂಡಿದೆ. ಆದರೆ ಮುಂಬರುವ ದಿನಗಳಲ್ಲಿ ನಿಧಾನವಾಗಿ ಇಳಿಮುಖವಾಗಲಿದೆ ಎಂದು ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಹೇಳಿದ್ದಾರೆ.
ಮಾರ್ಚ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ, ಫೆಬ್ರವರಿ ತಿಂಗಳಿಂತ ಹೆಚ್ಚಳವಾಗಿತ್ತು.ಆದರೆ ನಿರಂತರ ಹಣದುಬ್ಬರ ಏರಿಕೆ ಜನತೆಯಲ್ಲಿ ಆತಂಕ ಮೂಡಿಸಿದೆ ಎಂದು ಬಸು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಫೆಬ್ರವರಿ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.9.89ಕ್ಕೆ ತಲುಪಿತ್ತು. ನಂತರ ಮಾರ್ಚ್ ತಿಂಗಳ ಅವಧಿಯಲ್ಲಿ ಶೇ.9.9ಕ್ಕೆ ಏರಿಕೆ ಕಂಡಿದೆ.ಆದರೆ ಕೆಲ ಆರ್ಥಿಕ ತಜ್ಞರು, ಸಮೀಕ್ಷೆಯಲ್ಲಿ ಹಣದುಬ್ಬರ ದರ ಶೇ.10.25ಕ್ಕೆ ತಲುಪಲಿದೆ ಎಂದು ತಿಳಿಸಿದ್ದರು.