ದೇಶದಲ್ಲಿ ಅಹಾರ ಧಾನ್ಯ ಸಂಗ್ರಹ ವಿಪುಲವಾಗಿದ್ದು, ಯಾವುದೇ ರೀತಿಯ ಆತಂಕ ಬೇಡ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೆ.ವಿ.ಥಾಮಸ್ ಹೇಳಿದ್ದಾರೆ.
ಪ್ರಸ್ತುತ ದೇಶದ ಅಹಾರ ಧಾನ್ಯ ಸಂಗ್ರಹಣೆ ಉತ್ತಮವಾಗಿದೆ.ಎಚ್ಚರಿಕೆ ವಹಿಸುವ ಪರಿಸ್ಥಿತಿಯಿಲ್ಲ. ದೇಶದ ಅಹಾರ ಸಂಗ್ರಹಣೆ ಶೇ.7ರಷ್ಟು ಕುಸಿದು 218.19 ಮಿಲಿಯನ್ ಟನ್ಗಳಿಗೆ ತಲುಪಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮುಂಗಡ ಹೇಳಿಕೆ ನೀಡಿದೆ.
2008-09ರ ಅವಧಿಯಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ಬರಗಾಲದಿಂದಾಗಿ, ದೇಶದ ಕೃಷಿ ಉತ್ಪಾದನೆ 234.47 ಮಿಲಿಯನ್ ಟನ್ಗಳಾಗಿತ್ತು.ಆದರೆ ಪ್ರಸಕ್ತ ವರ್ಷದ ಅವಧಿಯಲ್ಲಿ ಮುಂಗಾರು ಮಳೆ ಉತ್ತಮವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.