ಹಣದುಬ್ಬರ ದರ ಏಪ್ರಿಲ್ ತಿಂಗಳಾಂತ್ಯಕ್ಕೆ ಅಲ್ಪ ಇಳಿಕೆ ಕಂಡು ಶೇ.9.59ಕ್ಕೆ ತಲುಪಿದೆ. ಆದರೆ ತರಕಾರಿ ಮತ್ತು ಉಕ್ಕು ದರಗಳಲ್ಲಿ ಮಾತ್ರ ಇಳಿಕೆಯಾಗದಿರುವುದು ಸಾಮನ್ಯ ಜನತೆಯಲ್ಲಿ ಆತಂಕ ಮೂಡಿಸಿದೆ.
ಗೋದಿ, ದ್ವಿದಳ ಧಾನ್ಯ ಈರುಳ್ಳಿ, ಹಣ್ಣು ದರಗಳಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ, ಕಳೆದ ಮಾರ್ಚ್ ತಿಂಗಳ ಅವಧಿಯಲ್ಲಿ ಸಗಟು ಸೂಚ್ಯಂಕ ಹಣದುಬ್ಬರ ದರ ಶೇ. 9.90 ರಿಂದ ಶೇ.9.59ಕ್ಕೆ ಇಳಿಕೆಯಾಗಿದೆ.
ಮಾಸಿಕ ಹಣದುಬ್ಬರ ಅಂಕಿ ಅಂಶಗಳ ಪ್ರಕಾರ ಏಪ್ರಿಲ್ ತಿಂಗಳ ಅವಧಿಯಲ್ಲಿ, ಆಲೂಗಡ್ಡೆ ದರದಲ್ಲಿ ಶೇ.28.70 ರಷ್ಟು ಇಳಿಕೆಯಾಗಿದೆ.ಈರುಳ್ಳಿ ದರದಲ್ಲಿ ಶೇ.11.62ರಷ್ಟು ಕುಸಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ ತಿಂಗಳಿಗೆ ಹೋಲಿಸಿದಲ್ಲಿ ಏಪ್ರಿಲ್ ತಿಂಗಳ ಅವಧಿಯಲ್ಲಿ ಉಕ್ಕು ಮತ್ತು ಸ್ಟೀಲ್ ದರಗಳಲ್ಲಿ ಶೇ.11.40ರಷ್ಟು ಏರಿಕೆಯಾಗಿದೆ.
ಮಾಸಿಕ ಆಧಾರದನ್ವಯ ಸಕ್ಕರೆ ದರದಲ್ಲಿ ಶೇ.5.74ರಷ್ಟು ಇಳಿಕೆ ಕಂಡಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ದರದಲ್ಲಿ ಏರಿಕೆಯಾಗಿದೆ.