ಕೇಂದ್ರ ಸರಕಾರ ನೋಂದಾಯಿತ ಕಂಪೆನಿಗಳಿಗೆ ನೈಸರ್ಗಿಕ ಅನಿಲ ಪೂರೈಸಿದ ನಂತರ, ಉಳಿದ ನೈಸರ್ಗಿಕ ಅನಿಲವನ್ನು ಅನಿಲ್ ಅಂಬಾನಿ ಸಂಚಾಲಿತ ಆರ್ಎನ್ಆರ್ಎಲ್ ಕಂಪೆನಿಗೆ ಪೂರೈಸಲು ಸರಕಾರ ಸಿದ್ಧವಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಅನಿಲ್ ಅಂಬಾನಿ ಸಂಚಾಲಿತ ಉತ್ತರ ಪ್ರದೇಶದ ದಾದ್ರಿಯಲ್ಲಿರುವ ನೂತನ ತೈಲ ಘಟಕಗಳಿಗೆ, ನೈಸರ್ಗಿಕ ಅನಿಲ ಲಭ್ಯವಾದ ನಂತರ ಸರಬರಾಜು ಮಾಡಲಾಗುವುದು ಎಂದು ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
ಅಪೆಕ್ಸ್ ನ್ಯಾಯಾಲಯ ನೈಸರ್ಗಿ ಅನಿಲ ಸರಬರಾಜು ನಿರ್ಧಾರ ಸರಕಾರದ ಹಕ್ಕು ಎಂದು ತೀರ್ಪು ನೀಡಿದ ನಂತರ, ಮುಕೇಶ್ ಮತ್ತು ಅನಿಲ್ ಅಂಬಾನಿ ಮಧ್ಯೆ ನೈಸರ್ಗಿಕ ಅನಿಲ ಸರಬರಾಜು ಕುರಿತಂತೆ ವಿವಾದ ಉಲ್ಬಣಿಸಿದೆ.
ನೂತನ ತೈಲ ಘಟಕಗಳಿಗೆ ನೈಸರ್ಗಿಕ ಅನಿಲ ಸರಬರಾಜು ಕುರಿತಂತೆ ಸರಕಾರ ನಿರ್ಧಾರ ತೆಗೆದುಕೊಂಡಿದೆ.ಹೆಚ್ಚುವರಿಯಾಗಿ ನೈಸರ್ಗಿಕ ಅನಿಲ ಲಭ್ಯವಾದಲ್ಲಿ ಮತ್ತು ಖರೀದಿಗೆ ಕಂಪೆನಿಗಳು ಸಿದ್ಧವಾದಲ್ಲಿ ಸರಕಾರಕ್ಕೆ ಅಭ್ಯಂತರವಿಲ್ಲ ಎಂದು ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.