ಸ್ಟೇಟ್ ಬ್ಯಾಂಕ್ ಆಫ್ ಇಂದೋರ್ ಶೀಘ್ರದಲ್ಲಿ ಎಸ್ಬಿಐನೊಂದಿಗೆ ವಿಲೀನವಾಗಲಿದ್ದು, ಇತರ ಐದು ಬ್ಯಾಂಕ್ಗಳ ವಿಲೀನಕ್ಕೆ ಸಮಯದ ಅಗತ್ಯವಿದೆ ಎಂದು ಎಸ್ಬಿಐ ಮುಖ್ಯಸ್ಥ ಒ.ಪಿ.ಭಟ್ ಹೇಳಿದ್ದಾರೆ.
ಎಸ್ಬಿಐ ಬ್ಯಾಂಕ್ ಆಯೋಜಿಸಿದ 'ಪಾಯಿಂಟ್ ಆಫ್ ಸೇಲ್: ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಟ್,ಶೀಘ್ರದಲ್ಲಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶಾದ್ಯಂತ ಇತರ ನಗರಗಳಲ್ಲಿ ಪಾಯಿಂಟ್ ಆಫ್ ಸೇಲ್ ಮಳಿಗೆಗಳನ್ನು ಆರಂಭಿಸುವ ಸಾಧ್ಯತೆಗಳಿವೆ ಎಂದು ಭಟ್ ತಿಳಿಸಿದ್ದಾರೆ.
ಶಮ್ಶಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ,1,111ನೇ ಶಾಖೆಯನ್ನು ಭಟ್ ಉದ್ಘಾಟಿಸಿದರು.