ಕಳೆದ 2008ರಲ್ಲಿ ಖಾಸಗಿ ಕಂಪೆನಿಗಳಿಗೆ ತರಂಗಾಂತರಗಳನ್ನು ನೀಡುವಲ್ಲಿ ಟೆಲಿಕಾಂ ಸಚಿವ ಎ.ರಾಜಾ ಅವ್ಯವಹಾರವೆಸಗಿದ್ದಾರೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಪ್ರಧಾನಿ, ಹಿಂದೆ ಅಧಿಕಾರದಲ್ಲಿದ್ದ ಎನ್ಡಿಎ ಸರಕಾರ ರೂಪಿಸಿದ ನಿಯಮಗಳನ್ನು ಪಾಲಿಸಿದ್ದಾರೆ ಎಂದು ಹೇಳಿದ್ದಾರೆ.
ಟೆಲಿಕಾಂ ಸಚಿವ ಎ.ರಾಜಾ ಅವರನ್ನು ಸಂಪುಟದಿಂದ ಕೈಬಿಡಲಾಗುವುದು ಎನ್ನುವ ವರದಿಗಳನ್ನು ತಳ್ಳಿಹಾಕಿ, ಟೆಲಿಕಾಂ ಹಗರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುವುದು ಸೂಕ್ತವಾಗದು ಎಂದು ತಿಳಿಸಿದ್ದಾರೆ.
ಕಳೆದ 2008ರ ಅವಧಿಯಲ್ಲಿ 2ಜಿ ತರಂಗಾಂತರಗಳ ಹರಾಜಿನಿಂದ ಕೇವಲ 10,000 ಕೋಟಿ ರೂಪಾಯಿಗಳ ಆದಾಯವಾಗಿತ್ತು. ಆದರೆ ಇದೀಗ ನಡೆದ 3ಜಿ ಹರಾಜು ಪಾರದರ್ಶಕವಾಗಿ ನಡೆದಿದ್ದರಿಂದ 67,700 ಕೋಟಿ ರೂಪಾಯಿಗಳ ಲಾಭವಾಗಿದೆ.ಟೆಲಿಕಾಂ ಹಗರಣದಿಂದ 1 ಲಕ್ಷ ಕೋಟಿ ರೂಪಾಯಿ ಸರಕಾರಕ್ಕೆ ನಷ್ಟವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.