ದೇಶದ ಖ್ಯಾತ ಉದ್ಯಮಿಗಳಾದ ಅಂಬಾನಿ ಸಹೋದರರ ಮಧ್ಯೆ ನಡೆದ ಶಾಂತಿ ಒಪ್ಪಂದದಿಂದಾಗಿ, ದೇಶದ ವಹಿವಾಟು ಉದ್ಯಮಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಉಭಯ ಸಹೋದರರ ಮಧ್ಯೆ ಶಾಂತಿ ಒಪ್ಪಂದವಾಗಿ, ದೀರ್ಘಾವಧಿಯ ವಿವಾದ ಅಂತ್ಯಗೊಂಡಿರುವುದನ್ನು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನೋಡಿ ಸಂತೋಷವಾಯಿತು.ಇದರಿಂದ ದೇಶದ ಕಾರ್ಪೋರೇಟ್ ಕಂಪೆನಿಗಳಿಗೆ ಲಾಭವಾಗಲಿದೆ ಎಂದು ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋಮವಾರದಂದು ಅಂಬಾನಿ ಸಹೋದರರು2006ರ ಜನೆವರಿ ತಿಂಗಳಲ್ಲಿ ಮಾಡಿಕೊಂಡ ಒಪ್ಪಂದವನ್ನು ಅಂತ್ಯಗೊಳಿಸಿದ್ದು, ಪರಸ್ಪರರ ಕ್ಷೇತ್ರಗಳಲ್ಲಿ ಉದ್ಯಮವನ್ನು ವೃದ್ಧಿಸಲು ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ನಡೆಯುತ್ತಿರುವ ಮಹಾನಗರ ಸಭೆ ಚುನಾವಣೆ ಪ್ರಚಾರಕ್ಕಾಗಿ ಸಚಿವ ಪ್ರಣಬ್ ಮುಖರ್ಜಿ ಆಗಮಿಸಿದ್ದಾರೆ.