ನವದೆಹಲಿ: ಜೂನ್ 12ರಿಂದ ಪುನಃ ಮುಷ್ಕರ ನಡೆಸುವುದಾಗಿ ಘೋಷಿಸಿರುವ ಏರ್ಇಂಡಿಯಾ ಕಾರ್ಮಿಕ ಸಂಘಟನೆಗಳಿಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಕೇಂದ್ರ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್, ಮಂಗಳೂರು ದುರಂತದ ಬಳಿಕ ಇಡೀ ಏರ್ಇಂಡಿಯಾ ಸಿಬ್ಬಂದಿ ಒಂದೇ ಕುಟುಂಬದಂತೆ ಒಗ್ಗಟ್ಟಿನಲ್ಲಿ ಇರಬೇಕಾಗಿತ್ತು. ಅದಕ್ಕೆ ಬದಲಾಗಿ ಈ ಬೇಜವಾಬ್ದಾರಿಯುತ ಮತ್ತು ಅಶಿಸ್ತಿನ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.