ಹಣದುಬ್ಬರ ಹೆಚ್ಚಳಕ್ಕೆ ಅಹಾರ ದರಗಳು ಏರಿಕೆ ಕಾರಣವಾಗಿದ್ದು, ಮುಂಗಾರು ಮಳೆ ಸಾಮಾನ್ಯವಾಗಿದ್ದಲ್ಲಿ ಅಹಾರ ದರಗಳಲ್ಲಿ ಇಳಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಉಪಗೌವರ್ನರ್ ಸುಬೀರ್ ಗೋಕರ್ಣ್ ಹೇಳಿದ್ದಾರೆ.
ಒಂದು ವೇಳೆ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿದಲ್ಲಿ, ಅಹಾರ ದರಗಳು ಶೀಘ್ರದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಸಿಂಗಾಪೂರ್ನಲ್ಲಿ ನಡೆದ ಹೂಡಿಕೆ ಸಮಾರಂಭದಲ್ಲಿ ಗೋಕರ್ಣ್ ತಿಳಿಸಿದ್ದಾರೆ.
ಅಹಾರ ದರಗಳ ಏರಿಕೆಯನ್ನು ನಿಯಂತ್ರಿಸಲು, ಕೇಂದ್ರ ಸರಕಾರ ಅಗತ್ಯವಾದ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್, ಮಾರುಕಟ್ಟೆಯಲ್ಲಿನ ನಗದು ಹರಿವನ್ನು ನಿಯಂತ್ರಿಸಲು, ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು,ಆರ್ಥಿಕ ವೃದ್ಧಿಗೆ ತಕ್ಕಂತೆ ಬಡ್ಡಿ ದರಗಳಲ್ಲಿ ಏರಿಕೆಯಾಗಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಉಪಗೌವರ್ನರ್ ಸುಬೀರ್ ಗೋಕರ್ಣ್ ಹೇಳಿದ್ದಾರೆ