ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ತೃತೀಯ ರಂಗ ಅಧಿಕಾರಕ್ಕೆ ಬರಲು ಕಷ್ಟವಿದೆ
ಮತಸಮರ
ರಾಷ್ಟ್ರದ ಅಭಿವೃದ್ಧಿಗಾಗಿ ಇರುವ ಏಕೈಕ ಪರ್ಯಾಯ ತೃತೀಯ ರಂಗವಾಗಿದ್ದರೂ ಮುಂಬರುವ ಮಹಾಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಅದಕ್ಕೆ ಕಷ್ಟವಾಗಬಹುದು ಎಂಬುದಾಗಿ ನುರಿತ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು ಮಂಗಳವಾರ ಹೇಳಿದ್ದಾರೆ.

"ಕೇಂದ್ರದಲ್ಲಿ ತೃತೀಯ ರಂಗ ತಕ್ಷಣಕ್ಕೆ ಬರುವ ಅವಶ್ಯಕತೆ ಇದೆ. ಅದು ಫಲಿಸಿದರೆ ಈ ಬಾರಿ ಸಿಪಿಐ-ಎಂ ಸರ್ಕಾರದಲ್ಲಿ ಸೇರ್ಪಡೆಯಾಗಲು ಸಾಧ್ಯವಾಗಲಿದೆ" ಎಂಬುದಾಗಿ ಅವರು ಇಲ್ಲಿನ ತಮ್ಮ ಸಾಲ್ಟ್ ಲೇಕ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.

"ಅದೇನೇ ಇದ್ದರೂ ತೃತೀಯ ರಂಗ ಅಧಿಕಾರಕ್ಕೆ ಬರುವುದು ಅತ್ಯಂತ ಕಷ್ಟ. ನಾವು ಈ ಪ್ರಯೋಗಕ್ಕೆ 1996ರಲ್ಲಿ ಮುಂದಾಗಿ ವಿಫಲವಾಗಿದ್ದೇವೆ" ಎಂಬುದಾಗಿ ಪಶ್ಚಿಮಬಂಗಾಳದ ಮಾಜಿ ಮುಖ್ಯಮಂತ್ರಿ ನೆನಪಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ವಿರೋಧಿಸುತ್ತಿರುವ ಪಕ್ಷಗಳನ್ನು ಒಟ್ಟು ಮಾಡುತ್ತಿರುವ ತೃತೀಯ ರಂಗವು, ಈ ಮೂಲಕ ಸಮಾನ ಮನಸ್ಕರ ಮೈತ್ರಿಕೂಟವನ್ನು ರಚಿಸುತ್ತಿದೆ. ಕರ್ನಾಟಕದ ತುಮಕೂರಿನಲ್ಲಿ ಕಳೆದ ವಾರ ತುಮಕೂರಿನಲ್ಲಿ ಅನಾವರಣಗೊಳಿಸಲಾಗಿದೆ.

ಅದರೆ ನಿಜವಾಗಿಯೂ ಜನತೆಗಾಗಿ ಕಾರ್ಯಕೈಗೊಳ್ಳುವಂತ ಸರ್ಕಾರವನ್ನು ರೂಪಿಸುವ ಗುರಿಹೊಂದಿದ್ದರೆ, ತೃತೀಯ ರಂಗ ಮಾತ್ರ ಪರ್ಯಾಯ ಪರಿಹಾರ ಎಂದು 95ರ ಹರೆಯದ ಬಸು ನುಡಿದರು.