* ವೀರಪ್ಪ ಮೊಯ್ಲಿಯ ಐದನೇ ಬಾರಿ ಸಂಸತ್ ಪ್ರವೇಶಿಸುವ ಪ್ರಯತ್ನ ದೂರದ ಚಿಕ್ಕಬಳ್ಳಾಪುರದಲ್ಲಿ ಯಶಸ್ಸು ನೀಡಿದೆ.
* ಕರ್ನಾಟಕದ ಲವ-ಕುಶರೆಂದೇ ಖ್ಯಾತರಾದ 8 ಬಾರಿ ಎಂಎಲ್ಎ ಸೀಟು ಗೆದ್ದು 9ನೇ ಬಾರಿ ಸೋತಿದ್ದ ಧರ್ಮ ಸಿಂಗ್- 10 ಬಾರಿ ಎಂಎಲ್ಎ ಸ್ಥಾನಕ್ಕೆ ಜಯಿಸುತ್ತಲೇ ಬಂದಿದ್ದ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿಗೆ ಮೊದಲ ಪ್ರಯತ್ನದಲ್ಲಿ ಆಯ್ಕೆಯಾಗಿದ್ದಾರೆ.
* ಬಿಜೆಪಿಯಿಂದ ಕಾಂಗ್ರೆಸಿಗೆ ಹಾರಿದ್ದ ಎಚ್.ಟಿ.ಸಾಂಗ್ಲಿಯಾನ ಅವರು ಸೋಲನ್ನಪ್ಪಿದ್ದಾರೆ.
* ಬೀದರಿನಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಹಾಗೂ ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸಿದ್ದ ಮಗ ಸೂರ್ಯಕಾಂತ ನಾಗಮಾರಪಳ್ಳಿ ಇಬ್ಬರೂ ಸೋಲನ್ನಪ್ಪಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಗುರುಪಾದಪ್ಪ ನಾಗಮಾರಪಳ್ಳಿ, ಆ ಕ್ಷೇತ್ರದಿಂದ ತಮ್ಮ ಮಗನನ್ನು ವಿಧಾನಸಭೆಗೆ ಕಳುಹಿಸಲು ಪ್ರಯತ್ನಿಸಿ ಮಗನೊಂದಿಗೆ ತಾವೂ ಸೋತರು.