ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > 19 ಮಂದಿ ಸಿಂಗ್ ಸಂಪುಟ ಅಸ್ತಿತ್ವಕ್ಕೆ, ಮಂಗಳವಾರ ವಿಸ್ತರಣೆ
ಮತಸಮರ
ಸತತ ಎರಡನೇ ಅವಧಿಗೆ ಮನಮೋಹನ್ ಸಿಂಗ್ ಅವರು ಶುಕ್ರವಾರ ಸಾಯಂಕಾಲ ಯುಪಿಎ ಸರಕಾರದ ಪ್ರಧಾನ ಮಂತ್ರಿಯಾಗಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಕರ್ನಾಟಕದಿಂದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ ಹಾಗೂ ಪ್ರಣಬ್ ಮುಖರ್ಜಿ, ವೀರಪ್ಪ ಮೊಯ್ಲಿ, ಶರದ್ ಪವಾರ್ ಸಹಿತ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದರು.

ಮಂಗಳವಾರ ವಿಸ್ತರಣೆ: ಯುಪಿಎ ಸರಕಾರದ ಪ್ರಥಮ ಸಂಪುಟ ವಿಸ್ತರಣೆ ಕಾರ್ಯಕ್ರಮ ಮಂಗಳವಾರ ನಡೆಯಲಿದ್ದು, ಅಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರೂ ಸಂಪುಟ ಸೇರುವ ನಿರೀಕ್ಷೆಗಳಿವೆ.

ಮಾಜಿ ಸಚಿವರಾದ ವಿಲಾಸ್ ಮುತಮ್ವಾರ್ ಮತ್ತು ಮುಕುಲ್ ವಾಸ್ನಿಕ್ ಸಹಿತ ಡಜನ್ ಮಂದಿ ಸಂಪುಟ ಸೇರಲಿದ್ದಾರೆ. ಬ್ಲ್ಯಾಕ್‌ಮೇಲ್ ಮಾಡುತ್ತಾ, ಕೊನೆಗೂ ಮಾತುಕತೆಯ ಸಂದರ್ಭ ಸಂಧಾನ ಮಾಡಿಕೊಂಡ ಡಿಎಂಕೆ ಸಚಿವರು ಕೂಡ ಅದೇ ದಿನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಯುಪಿಎ-2 ಸಂಪುಟ ಸೇರಿಕೊಂಡವರು:
ಪ್ರಧಾನಿ ಮನಮೋಹನ್ ಸಿಂಗ್
ಪ್ರಣಬ್ ಮುಖರ್ಜಿ
ಶರದ್ ಪವಾರ್
ಎ.ಕೆ.ಆಂಟನಿ
ಪಿ.ಚಿದಂಬರಂ
ಮಮತಾ ಬ್ಯಾನರ್ಜಿ
ಎಸ್.ಎಂ.ಕೃಷ್ಣ
ಗುಲಾಂ ನಬೀ ಆಜಾದ್