ಅವಿನಾಶ್ ಬಿ. ನಾನೊಬ್ಬ ಕನ್ನಡಿಗ ಆಗಿರುವುದಕ್ಕೇ ನಾಚಿಕೆಯಾಗ್ತಿದೆ. ಯಾವುದೋ ಪಾಪ ಮಾಡಿ ಕರ್ನಾಟಕದಲ್ಲಿ ಹುಟ್ಟಿದ್ದೀನಿ. ಇಲ್ಲಿ ಹುಟ್ಬಾರ್ದಿತ್ತು. ಆದ್ರೆ ಹುಟ್ಟಿದ್ದು ನನ್ನ ಕರ್ಮ ಅನ್ನೋ ಆಣಿಮುತ್ತುಗಳು ಒಂದು ಕಾಲದಲ್ಲಿ ದೇಶವನ್ನೇ ಆಳಿದ್ದ ಮಾಜಿ ಪ್ರಧಾನಿಯೊಬ್ಬರ ಬಾಯಿಂದ ಉದುರಿವೆ ಎಂಬುದನ್ನು ಕೇಳಿದ್ದೇವೆ, ಓದಿದ್ದೇವೆ. ಬೀದರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಮ್ಮನ್ನು ಟೀಕಿಸುತ್ತಿರುವ ಪಕ್ಷಗಳ ವಿರುದ್ಧ ಕೆಂಡ ಕಾರುತ್ತಾ ಕಾರುತ್ತಾ ಅವರು ಒಳಗಿದ್ದ ತಳಮಳವನ್ನು ಕಾರಿದ್ದು, ತಮ್ಮ ನಿಜರೂಪವನ್ನು ತೋರಿದ್ದು ಈ ವಾಕ್ಯಗಳ ಮೂಲಕ.ಅವರ