ರಾಜಕೀಯ ಕಲಿಯಬೇಕಿದ್ದರೆ ದೇವೇಗೌಡರ ಪಾಠಶಾಲೆಗೆ ಹೋಗಬೇಕು. ಮೊನ್ನೆ ಮೊನ್ನೆಯವರೆಗೂ ಬದ್ಧ ವೈರಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಡುತ್ತಲೇ ಬಂದಿದ್ದ ಮಾಜಿ NRB ಪ್ರಧಾನಿ ದೇವೇಗೌಡರೀಗ ಕಾಂಗ್ರೆಸಿಗೆ ಹತ್ತಿರವಾಗತೊಡಗಿರುವುದು ರಾಜಕೀಯ ಪಂಡಿತರಿಗೆ ಸಾಧ್ಯಾಸಾಧ್ಯತೆಯ ಹೊಸ ಲೆಕ್ಕಾಚಾರಕ್ಕೆ ಮೇವು ಒದಗಿಸಿಕೊಟ್ಟಿದೆ.ಕೇಂದ್ರದಲ್ಲಿ ಎಡಪಕ್ಷಗಳ ಹಂಗಿನಿಂದ ಹೊರಬರಲು ನಿರ್ಧರಿಸಿರುವ ಯುಪಿಎ ಸರಕಾರ ಪತನದಂಚಿನಲ್ಲಿರುವಾಗ, ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದೊಂದು ಸಂಸದ ಸ್ಥಾನ ಕೂಡ ಅತ್ಯಮೂಲ್ಯ. ಹೀಗಾಗಿ ಎರಡು ಸಂಸತ್ಸದಸ್ಯರನ್ನು ಹೊಂದಿರುವ ಜಾತ್ಯತೀತ ಜನತಾ ದಳ ಬೆಂಬಲ