ದೇಶದಲ್ಲಿರುವ ಜನಾಂಗೀಯ ಹಿಂದೂಗಳ ವರ್ತನೆ ವಿಶ್ವಾಸಘಾತುಕವಾಗಿದ್ದರಿಂದ ಆಂತರಿಕ ಭಧ್ರತೆ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಪ್ರಧಾನಿ ಅಬ್ದುಲ್ಲಾ ಬದಾವೈ ತಿಳಿಸಿದ್ದಾರೆ.
ಜನಾಂಗೀಯ ನಿಂದನೆ ಹಾಗೂ ತಾರತಮ್ಯದ ಆರೋಪಗಳನ್ನು ಹಿಂದ್ರಫ್ ಸಂಘಟನೆಯ ಪದಾಧಿಕಾರಿಗಳು ಮಾಡಿರುವುದರಿಂದ ದೇಶದಲ್ಲಿ ಹಣಹೂಡಿಕೆದಾರರಿಗೆ ಹಾಗೂ ಪ್ರವಾಸಿಗಳಿಗೆ ಮಲೇಷಿಯಾದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಪ್ರಧಾನಿ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.
ಜನಾಂಗೀಯ ಹಿಂದೂಗಳ ವರ್ತನೆ ವಿಶ್ವಾಸಘಾತುಕವಾಗಿದ್ದು ದೇಶದ ಹಿತಾಸಕ್ತಿಗೆ ಧಕ್ಕೆ ತರುವುದಾಗಿದ್ದರಿಂದ ಆಂತರಿಕ ಭಧ್ರತೆ ಕಾಯ್ದೆಗೆ ನಾನು ಹಸ್ತಾಕ್ಷರ ಮಾಡಿದ್ದೆನೆ.ಇದಕ್ಕಿಂತ ಹೆಚ್ಚಿಗೆ ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ವಾಕ್ಸ್ವಾತಂತ್ರದ ಬೆಲೆಯನ್ನು ಅರಿತಿದ್ದೇನೆ. ಆದರೆ ದೇಶದ ಶಾಂತಿ ಮತ್ತು ಭದ್ರತೆಗೆ ಕಾನೂನು ಸುವ್ಯವಸ್ಥೆಗೆ ಮೊದಲು ಆದ್ಯತೆ ಕಾಯ್ದಿರಿಸಬೇಕಾಗುತ್ತದೆ ಎಂದು ಪ್ರಧಾನಿ ಅಬ್ದುಲ್ಲಾ ಬದಾವೈ ತಿಳಿಸಿದ್ದಾರೆ.
|