ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈ ದಾಳಿ ತನಿಖೆ-ಪಾಕ್‌ನಿಂದ ವಿವರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿ ತನಿಖೆ-ಪಾಕ್‌ನಿಂದ ವಿವರಣೆ
ಪಾಕ್ ನೆಲದ ಉಗ್ರರಿಂದ ಮುಂಬೈ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿ ಕುರಿತಂತೆ ಭಾರತ ಪುರಾವೆಗಳನ್ನು ಹಸ್ತಾಂತರಿಸಿದ ಬಳಿಕ ಏನು ಕ್ರಮ ಕೈಗೊಂಡಿದೆ ಎಂಬ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕ್ ಆ ಕುರಿತು ಸೋಮವಾರ ವಿದೇಶಿ ರಾಯಭಾರಿಗಳಿಗೆ ವಿವರಣೆಯನ್ನು ನೀಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹಾಗೂ ಆಂತರಿಕ ಸಲಹೆಗಾರ ರೆಹಮಾನ್ ಮಲಿಕ್ ಕೂಡ ದಾಳಿ ತನಿಖೆಯ ವಿವರಣೆ ನೀಡಲಿದ್ದಾರೆಂದು ಜಿಯೋ ಟಿವಿ ವರದಿ ಹೇಳಿದೆ. ಆದರೆ ಈ ವಿದೇಶಿ ರಾಯಭಾರಿಗಳಲ್ಲಿ ಭಾರತೀಯ ರಾಯಭಾರಿ ಸೇರಿಲ್ಲ ಎನ್ನುವುದು ಮತ್ತೊಂದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ವಿಶ್ವಸಂಸ್ಥೆ ವಿವಿಧ ಉಗ್ರಗಾಮಿ ಸಂಘಟನೆ ಮೇಲೆ ಹೇರಿದ್ದ ನಿಷೇಧ ಹಾಗೂ ಮುಂಬೈ ದಾಳಿ ಕುರಿತಂತೆ ಕೈಗೊಂಡ ಕ್ರಮ, ತನಿಖೆಯ ಕುರಿತು ವಿದೇಶಾಂಗ ರಾಯಭಾರಿಗಳು ಬಹಿರಂಗಪಡಿಸಲಿದ್ದಾರೆ.

ಅಲ್ಲದೇ ಮುಂಬೈ ದಾಳಿ ಕಾರಣಕರ್ತರಾದ ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಲಾಗುವುದು ಎಂದು ಪಾಕಿಸ್ತಾನ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿ, ಪಾಕ್‌ಗೆ ಸಹಕಾರ ನೀಡಿರುವುದಾಗಿ ಹೇಳಿರುವ ಭಾರತ ನಿಲುವು ಸ್ವಾಗತಾರ್ಹ ಎಂಬುದಾಗಿ ತಿಳಿಸಿತ್ತು.

ಏತನ್ಮಧ್ಯೆ ಪಾಕಿಸ್ತಾನದ ಮೇಲಿನ ಒತ್ತಡವನ್ನು ಮುಂದುವರಿಸಿರುವುದಾಗಿ ಹೇಳಿರುವ ಭಾರತ, ದಾಳಿ ಸಂದರ್ಭದಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಕಸಬ್‌ನ ಡಿಎನ್‌ಎ ಸ್ಯಾಂಪಲ್ ಅನ್ನು ಎರಡನೇ ಹಂತದ ಪುರಾವೆಯನ್ನಾಗಿ ಪಾಕ್‌ಗೆ ಕಳುಹಿಸಲಾಗುವುದು ಎಂದು ಭಾರತ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮ ಪ್ರಾರ್ಥನಾ ಸಭೆಗೆ 'ಹಿಂದೂ ಪುರೋಹಿತೆ' ನೇತೃತ್ವ
26/11 ದಾಳಿ ಪುನರಾವರ್ತನೆಯಾಗಲಿದೆ: ಅಮೆರಿಕ ಎಚ್ಚರಿಕೆ
ಮೇಲಕ್ಕೆತ್ತಿದ ದುರಂತದ ವಿಮಾನ
ಪ್ರಭಾಕರನ್ ಪರಾರಿ: ಸೇನಾ ಮುಖ್ಯಸ್ಥ
ಮುಂಬೈ ದಾಳಿ ತನಿಖೆ-ಭಾರತ ಸಹಕಾರಕ್ಕೆ ಸ್ವಾಗತ: ಪಾಕ್
ಗಾಜಾ: ಕದನ ವಿರಾಮ ಘೋಷಿಸಿದ ಇಸ್ರೇಲ್