ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇಗೆ 48ಗಂಟೆಗಳ ಅಂತಿಮ ಗಡುವು: ಶ್ರೀಲಂಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇಗೆ 48ಗಂಟೆಗಳ ಅಂತಿಮ ಗಡುವು: ಶ್ರೀಲಂಕಾ
ತಮಿಳು ಬಂಡುಕೋರರ ಪ್ರಾಬಲ್ಯವಿರುವ ಪ್ರದೇಶದಲ್ಲಿರುವ ತಮಿಳು ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಭಾರತದ ಮನವಿಗೆ ಸ್ಪಂದಿಸಿರುವ ಶ್ರೀಲಂಕಾ, ನಾಗರಿಕರು ಮುಕ್ತವಾಗಿ ಓಡಾಡಲು ಅನುಕೂಲವಾಗುವ ವಾತಾವರಣ ಕಲ್ಪಿಸಿಕೊಡುವಂತೆ ಎಲ್‌ಟಿಟಿಇಗೆ 48ಗಂಟೆಗಳ ಅಂತಿಮ ಗಡುವು ನೀಡಿರುವುದಾಗಿ ಅಧ್ಯಕ್ಷ ಮಹೀಂದ ರಾಜಪಕ್ಸೆ ಎಚ್ಚರಿಕೆ ನೀಡಿದ್ದಾರೆ.

ತಮಿಳುಬಂಡುಕೋರರ ನೆಲೆಯಲ್ಲಿನ ನಾಗರಿಕರು ಯಾವುದೇ ಭಯಾತಂಕಗಳಿಲ್ಲದೆ ಮುಕ್ತವಾಗಿ ಓಡಾಡುವ ಅವಕಾಶ ನೀಡುವಂತೆ ಎಲ್‌ಟಿಟಿಇಯನ್ನು ಆಗ್ರಹಿಸಿರುವ ರಾಜಪಕ್ಸೆ, ಅದಕ್ಕಾಗಿ 48ಗಂಟೆಗಳ ಅಂತಿಮ ಗಡುವು ನೀಡಿದ್ದಾರೆ. ಅಲ್ಲದೇ ನಾಗರಿಕರಿಗೆ ಯಾವುದೇ ರೀತಿಯ ಅಪಾಯವಾಗದಂತೆ ಸುರಕ್ಷಿತ ನೆಲೆ ಒದಗಿಸಲಾಗುವುದು ಎಂಬ ಭರವಸೆ ನೀಡುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.

ಘರ್ಷಣೆಯ ಸಂದರ್ಭದಲ್ಲಿ ತಮಿಳು ಬಂಡುಕೋರರು ನಾಗರಿಕರನ್ನೇ ಗುರಾಣಿಯನ್ನಾಗಿಸಿಕೊಂಡು, ಅವರನ್ನೇ ಬಲಿತೆಗೆದುಕೊಳ್ಳುತ್ತಿರುವ ಎಲ್‌ಟಿಟಿಇ ಕಾರ್ಯವೈಖರಿ ದುರದೃಷ್ಟಕರವಾದದ್ದು ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಈಗಲೂ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ ಸುಮಾರು 250,000ನಾಗರಿಕರು ಎಲ್‌ಟಿಟಿಇ ಹಿಡಿತದಲ್ಲಿಯೇ ಇದ್ದಿರುವುದಾಗಿ ರೆಡ್ ಕ್ರಾಸ್ ಅಂಕಿ-ಅಂಶ ತಿಳಿಸಿದೆ. ಎಲ್‌ಟಿಟಿಇ ಅಮಾಯಕರ ಪ್ರಾಣದ ಜತೆ ಚಲ್ಲಾಟವಾಡುತ್ತಿರುವ ಬಗ್ಗೆ ಮಾನವ ಹಕ್ಕು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ಉತ್ತರ: ಕಸಬ್ ಸತ್ತಿದ್ದಾನೆ ಎನ್ನಲಿರುವ ಪಾಕ್!
ಶೀಘ್ರದಲ್ಲಿ ಇರಾನ್‌ನಿಂದ ಉಪಗ್ರಹ ಉಡಾವಣೆ
ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆ
ಉಗ್ರರ ದಾಳಿ 'ಸ್ಪಂಜ್'ನಂತೆ ಹೀರಿಕೊಂಡ ಭಾರತ: ಯುಎಸ್
ಉಗ್ರರ ಕೃತ್ಯಕ್ಕೆ ಪಾಕ್ ನೆಲದಲ್ಲಿ ಅವಕಾಶವಿಲ್ಲ: ಗಿಲಾನಿ
ಮುಂಬೈ ಘಟನೆ ಮತ್ತೆ ಮರುಕಳಿಸಬಾರದು: ಮೆಕೇನ್