ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಸಾವಿನ ಸುದ್ದಿಯನ್ನು ಮತ್ತು ಎಲ್ಟಿಟಿಇ ದಮನವನ್ನು ಶ್ರೀಲಂಕಾ ಜನತೆ ಸಂಭ್ರಮದಿಂದ ಆಚರಿಸಿದರೆ, ರಾಷ್ಟ್ರದ ತಮಿಳು ಜನತೆಯಲ್ಲಿ ವಿಷಣ್ಣ ಭಾವ ಆವರಿಸಿದೆ.
ತಮಿಳರ ಪ್ರಾಬಲ್ಯದ ವೆಲ್ಲವಟ್ಟದಲ್ಲಿ ಯಾವುದೇ ಸಂಭ್ರಮದ ಸುಳಿವು ಕಂಡುಬರಲಿಲ್ಲ. ತಮಿಳು ಜನತೆ ಮತ್ತು ಎಲ್ಟಿಟಿಇ ನಡುವೆ ಬೆಸೆದ ಪ್ರೀತಿ ಕುಂದಿಲ್ಲವಾದ್ದರಿಂದ ನಮ್ಮ ಆಚರಣೆಗೆ ಅರ್ಥವಿಲ್ಲ. ಆದಾಗ್ಯೂ, ಬಹುಸಂಖ್ಯಾತರ ಪ್ರಾಬಲ್ಯದ ಸರ್ಕಾರಗಳು ಅಲ್ಪಾಸಂಖ್ಯಾತರ ಆಶೋತ್ತರಗಳು, ಕುಂದುಕೊರತೆಗಳ ಬಗ್ಗೆ ತಾಳಿದ್ದ ಉದಾಸೀನ ಮನೋಭಾವವೇ ತಮಿಳು ಭಯೋತ್ಪಾದಕತೆ ದ್ವೀಪರಾಷ್ಟ್ರದಲ್ಲಿ ಬೇರುಬಿಡಲು ಕಾರಣವಾಯಿತೆಂದು ಅವರು ನಂಬಿದ್ದಾರೆ.
ಜನಾಂಗೀಯ ಸಂಘರ್ಷದ ಮೂಲ ಕಾರಣಗಳ ಪರಿಹಾರದತ್ತ ಸರ್ಕಾರ ನೈಜ ನಿಲುವನ್ನು ಹೊಂದಿರದಿದ್ದರೆ, ಅಲ್ಪಸಂಖ್ಯಾತರಿಗೆ ಪ್ರತ್ಯೇಕತೆಯ ಭಾವನೆ ಬರುತ್ತದೆಂದು ಅವರು ಭಾವಿಸಿದ್ದಾರೆ. |