ಇತ್ತೀಚೆಗೆ ಮುಕ್ತಾಯವಾದ ಯುದ್ಧದಿಂದ ಸಂತ್ರಸ್ತರಾದ 280,000 ತಮಿಳರ ಪುನರ್ವಸತಿ ಕೆಲಸವನ್ನು 6 ತಿಂಗಳಲ್ಲಿ ಮುಗಿಸುವುದಾಗಿ ಶ್ರೀಲಂಕಾ ಸರ್ಕಾರ ತಿಳಿಸಿದೆ.ಶ್ರೀಲಂಕಾ ತಮಿಳರ ಸಂಕಷ್ಟದ ಸ್ಥಿತಿ ಬಗ್ಗೆ ಗಮನಸೆಳೆಯಲು ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ನಾರಾಯಣನ್ ಅವರು ಅಧ್ಯಕ್ಷ ರಾಜಪಕ್ಷೆ ಅವರನ್ನು ಭೇಟಿ ಮಾಡಿದ ಬಳಿಕ ಈ ಭರವಸೆ ನೀಡಲಾಯಿತು.ಅವರ ಜಂಟಿ ಹೇಳಿಕೆಯು ತುರ್ತಾಗಿ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮತ್ತು ಕಾಯಂ