ದ್ವೀಪದಲ್ಲಿ ತಮಿಳು ಪ್ರತ್ಯೇಕತಾವಾದಿ ಹೋರಾಟಕ್ಕೆ ಸೋಲುಂಟಾದ ಬಳಿಕ ವಿಜಯೋತ್ಸವ ಆಚರಿಸುವ ಶ್ರೀಲಂಕಾ ಸರ್ಕಾರದ ಕ್ರಮದ ವಿರುದ್ಧ ವಿಶ್ವಸಂಸ್ಥೆ ಮುಖಂಡ ಬಾನ್ ಕಿ ಮೂನ್ ಎಚ್ಚರಿಸಿದ್ದು, ಕಹಿ ಸಂಘರ್ಷದ ಗಾಯಗಳನ್ನು ಮಾಗಿಸುವಂತೆ ಅವರು ಒತ್ತಾಯಿಸಿದ್ದಾರೆ.
ಶ್ರೀಲಂಕಾ ಭೇಟಿ ಬಳಿಕ 15 ಸದಸ್ಯರ ಭದ್ರತಾಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ನಂತರ ಮಾತನಾಡಿದ ಬಾನ್, ವಿಜಯದ ಹಿನ್ನೆಲೆಯಲ್ಲಿ ಸಂಭ್ರಾಮಚರಣೆಯಲ್ಲಿ ಮುಳುಗುವುದರ ಅಪಾಯದ ವಿರುದ್ಧ ತಾವು ಎಚ್ಚರಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಗಾಯಗಳನ್ನು ಗುಣಪಡಿಸುವುದು ಮುಖ್ಯವೇ ಹೊರತು ವಿಜಯೋತ್ಸವ ಆಚರಿಸುವುದಲ್ಲ ಎಂದು ಅವರು ನುಡಿದರು.
ಸಂತ್ರಸ್ತರಾದ ಸುಮಾರು ಮೂರು ಲಕ್ಷ ಜನರಿಗೆ ಮಾನವೀಯ ನೆರವು ನೀಡುವ ಅಗತ್ಯವನ್ನು ಪುನರುಚ್ಚರಿಸಿದರು.ಅಲ್ಪಸಂಖ್ಯಾತ ತಮಿಳರು ಮತ್ತು ಮುಸ್ಲಿಮರ ಆಶೋತ್ತರಗಳಿಗೆ ಸ್ಪಂದಿಸಲು ಶ್ರೀಲಂಕಾ ಸರ್ಕಾರ ನೆರವು ನೀಡುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. |