ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತನಿಖೆ ವಿಳಂಬಕ್ಕೆ ಭಾರತ ಕಾರಣ: ಪಾಕ್ ವರಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತನಿಖೆ ವಿಳಂಬಕ್ಕೆ ಭಾರತ ಕಾರಣ: ಪಾಕ್ ವರಸೆ
26/11 ದಾಳಿಗಳಲ್ಲಿ ಕಾರಣಕರ್ತರಾದ ಪಾಕ್ ಸೂತ್ರಧಾರರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನ ಒಂದಿಲ್ಲೊಂದು ನೆಪ ಹೇಳುತ್ತಿದ್ದು, ಈಗ ತನಿಖೆ ವಿಳಂಬಕ್ಕೆ ಭಾರತವೇ ಕಾರಣ ಎಂದು ಮತ್ತೊಂದು ವರಸೆ ತೆಗೆದಿದೆ. ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಭಯೋತ್ಪಾದನೆ ದಾಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ನಾವು ಭಾರತಕ್ಕೆ ಕೇಳಿದ್ದೆವು.

ಆದರೆ ಭಾರತ ನಮ್ಮ ಮಾತಿಗೆ ಬೆಲೆ ಕೊಡದೇ ನಿರ್ಣಾಯಕ ಮಾಹಿತಿಯನ್ನು ಒದಗಿಸಿಲ್ಲವೆಂದು ನುಡಿದರು. 26/11 ದಾಳಿಗಳನ್ನು ಕುರಿತು ನಾವು ಭಾರತೀಯ ಹೈಕಮೀಷನ್‌ಗೆ ದಾಖಲೆಯನ್ನು ಹಸ್ತಾಂತರಿಸುತ್ತಿದ್ದೇವೆಂದು ಅವರು ನುಡಿದರು. ಮುಂದಿನ ವಾರ ಮುಂಬೈ ಭಯೋತ್ಪಾದನೆ ದಾಳಿ ಕುರಿತ ವಿಚಾರಣೆ ನಡೆಯಲಿದೆಯೆಂದು ಅವರು ಹೇಳಿದರು. '9 ಮುಖ್ಯ ಆರೋಪಿಗಳಲ್ಲಿ ಐವರನ್ನು ಸರ್ಕಾರ ಬಂಧಿಸಿದೆ.

ಪಾಕಿಸ್ತಾನದ ಕಾನೂನಿನ ಅನ್ವಯ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಲಾಗುವುದು 'ಎಂದು ಅವರು ನುಡಿದರು. ಪಾಕಿಸ್ತಾನ ತನಿಖೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೆಂಬ ಭಾರತದ ಆರೋಪವನ್ನು ಅವರು ನಿರಾಕರಿಸಿದರು. ಪಾಕಿಸ್ತಾನ 26/11 ತನಿಖೆಯನ್ನು ಬಹಳ ಮುತುವರ್ಜಿಯಿಂದ ನಡೆಸುತ್ತಿದೆಯೆಂದು ತಿಳಿಸಿದರು.26/11 ತನಿಖೆಯಲ್ಲಿ ಪ್ರಗತಿಯನ್ನು ಸಮಜೌತ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಹೋಲಿಸಿದ ಅವರು, ಸಮಜೌತ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ವರದಿ ಸಲ್ಲಿಸಲು ಭಾರತ 90 ದಿನಗಳನ್ನು ತೆಗೆದುಕೊಂಡಿತು. ಆದರೆ ಪಾಕಿಸ್ತಾನ ಮುಂಬೈ ದಾಳಿಗಳನ್ನು ಕುರಿತು ದಾಖಲೆ ನೀಡಲು ಕೇವಲ 76 ದಿನಗಳನ್ನು ತೆಗೆದುಕೊಂಡಿತೆಂದು ಅವರು ಟೀಕಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಜತೆ ಕಳವಳ ನಿಭಾಯಿಸಿದರೆ ಪಾಕ್ 'ದಳ್ಳಾಳಿ'
15 ಸಿಬ್ಬಂದಿಯಿದ್ದ ಭಾರತೀಯ ನೌಕೆ ಅಪಹರಣ
'ಉರುಂಕಿ ಗಲಭೆಕೋರರಿಗೆ ಅಲ್ ಖಾಯಿದಾ ನಂಟು'
ಜಿ-8ರ ಸಾವು ಸನ್ನಿಹಿತ, ಫಿನಿಕ್ಸ್‌ನಂತೆ ಮೇಲೆದ್ದ ಜಿ-14
ಸಾವಿನ ಅಂಚಿನಲ್ಲಿ ತಾಲಿಬಾನ್ ಮುಖ್ಯಸ್ಥ ಫಜಲುಲ್ಲಾ
ಡ್ರಗ್ ಓವರ್‌ಡೋಸ್‌ನಿಂದ ಮೈಕೆಲ್ ಜಾಕ್ಸನ್ ಸಾವು