ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಮತಾ ಒಪ್ಪಿಗೆ- ಮೇ 24ಕ್ಕೆ ಸರ್ವಪಕ್ಷ ಸಭೆ
webdunia
Mamatha
PTI
ಕೈಗಾರಿಕಾ ಯೋಜನೆಗಾಗಿ ರೈತರ ಭೂಸ್ವಾಧೀನ ವಿಷಯದಲ್ಲಿ ವಿವಾದಕ್ಕೀಡಾಗಿರುವ ಪಶ್ಚಿಮ ಬಂಗಾಳದ ನಂದಿಗ್ರಾಮ ಪ್ರಕರಣದ ಕುರಿತು ಮೇ 24 ರಂದು ಚರ್ಚೆ ನಡೆಸಲು ಎಡರಂಗ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಒಪ್ಪಿಗೆ ಸೂಚಿಸಿರುವುದು ಹೊಸ ಬೆಳವಣಿಗೆಯಾಗಿದೆ.

ಫಾರ್‌ವಾರ್ಡ್ ಬ್ಲಾಕ್ ನಾಯಕ ಅಶೋಕ ಘೋಷ್ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ನಡುವೆ ಪೂರ್ವ ನಿದರ್ಶನವಿಲ್ಲದೆ ಏರ್ಪಟ್ಟ ಮಾತುಕತೆಯೇ ಈ ಬೆಳವಣಿಗೆಗೆ ಕಾರಣವಾಗಿದೆ.

ರಾಜಕೀಯದ ಉನ್ನತ ವ್ಯಕ್ತಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆಯೆ ಎಂಬುವುದರ ಬಗ್ಗೆ ಇನ್ನೂ ಮಾಹಿತಿಗಳು ಬಂದಿಲ್ಲ. ಆದರೆ, ನಂದಿಗ್ರಾಮದಲ್ಲಿ ಉಂಟಾಗಿರುವ ಅಸ್ಥಿರತೆಯನ್ನು ಹೋಗಲಾಡಿಸುವ ಮೊದಲ ಹೆಜ್ಜೆ ಇದಾಗಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಹಾಗೂ ಸಿಬಿಐ (ಎಂ)ನ ಮಿತ್ರರಾದ ಬಿಮನ್ ಬೋಸ್ ಅವರ ನಡುವೆ ಏರ್ಪಟ್ಟ ಶಾಂತಿ ಮಾತುಕತೆಯ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾಗೆ ಅಸಮಾಧಾನ ಉಂಟಾಗಿತ್ತು.
ಮತ್ತಷ್ಟು
ಭಯೋತ್ಪಾದನಾ ನಿಗ್ರಹಕ್ಕೆ ಭಾರತಕ್ಕೆಚೀನ ಬೆಂಬಲ
ದೇರಾ ಮುಖ್ಯಸ್ಥರ ವಿರುದ್ಧ ಪೋಲಿಸ್ ಪ್ರಕರಣ
ಮಸೀದಿ ಬಳಿ ಸ್ಪೋಟ: ಹೈದರಾಬಾದ್ ಶಾಂತ
ಶಿಲ್ಫಾ ಶೆಟ್ಟಿ ವಿರುದ್ದದ ವಿಚಾರಣೆಗೆ ತಡೆ
ಮಧುರೈ ಹಿಂಸಾಚಾರ - ದುಷ್ಕರ್ಮಿ ಪೊಲೀಸರಿಗೆ ಶರಣು
ಗುಜರಾತ್‌-ಗೋವಾ ಚುನಾವಣೆಗೆ ಸಿದ್ಧರಾಗಿ: ಸೋನಿಯಾ