ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ತಮಿಳುನಾಡಿನ ತಿರುಪ್ಪೂರಿನಲ್ಲಿ ಗೋಡೆ ಕುಸಿದು 30 ಬಲಿ
webdunia
ತಮಿಳುನಾಡಿನ ತಿರುಪ್ಪೂರ್‌ಗೆ ಸಮೀಪವಿರುವ ಅನಗೇರಿಪಾಳಯ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 30 ಮಂದಿಸಾವನ್ನಪ್ಪಿದ್ದಾರೆ.

ಇಲ್ಲಿನ ಬಾರ್‍ವೊಂದರಲ್ಲಿ ಮದ್ಯವನ್ನು ಖರೀದಿಸುತ್ತಿದ್ದವರ ಮೇಲೆ ಬುಧವಾರ ರಾತ್ರಿ ಗೋಡೆ ಕುಸಿದು ಬಿದ್ದ ಪರಿಣಾಮ ಸ್ಧಳದಲ್ಲೇ 30 ಮಂದಿ ಸಾವನ್ನಪ್ಪಿದ್ದು,ಐದು ಜನರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗೋಡೆಯ ಅಡಿ ಭಾಗದಲ್ಲಿ ಸಿಲುಕಿ ಬಿದ್ದಿರುವ ಮೃತ ದೇಹಗಳನ್ನು ಹೊರ ತೆಗೆಯುವಲ್ಲಿ ಅಗ್ನಿಶಾಮಕ ದಳ,ರಕ್ಷಣಾ ಪಡೆ,ಪೊಲೀಸರು ಹಾಗೂ ಸಾರ್ವಜನಿಕರು ಸಹಕರಿಸುತ್ತಿದ್ದು,ಸುಮಾರು 27ಮಂದಿ ದೇಹಗಳನ್ನು ತೆಗೆಯಲಾಗಿದ್ದು,ಅವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಐದು ಜನರನ್ನು ತಿರುಪುರ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬಾರ್ ಸಮೀಪದ ಸುಮಾರು 22 ಅಡಿ ಎತ್ತರದ ಗೋಡೆ ಕುಸಿದು ಬಿದ್ದ ಪರಿಣಾಮ ಮದ್ಯ ಸೇವಿಸುತ್ತಿದ್ದ ಹಾಗೂ ಖರೀದಿಸುತ್ತಿದ್ದ ಜನರು ಬಲಿಯಾಗಿದ್ದರು.

ಮಳೆಯಿಂದ ರಕ್ಷಿಸಲು ಈ ಗೋಡೆಯನ್ನು ಕಟ್ಟಲಾಗಿತ್ತು.ಕುಸಿದು ಬಿದ್ದ ಗೋಡೆಯನ್ನು ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಕಲ್ಲುಗಳನ್ನು ಒಂದೆಡೆ ಸೇರಿಸಿ ಇಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಮಿಲಿಟರಿ ಕಾಶ್ಮೀರ ಸಮಸ್ಯೆಗೆ ಪರಿಹಾರವಲ್ಲ
ಒಎನ್‌ಜಿಸಿ ಶಂಕುಸ್ಥಾಪನೆ- ಮಂಗಳೂರಿಗೆ ಪ್ರಧಾನಿ
ಜೂನ್ 1ರಂದು ತಾಜ್ ಪ್ರಕರಣ ವಿಚಾರಣೆ
ರಸ್ತೆ ಅಫಘಾತದಲ್ಲಿ 3ಸಾವು
ಯುಪಿಎ ಸರ್ಕಾರಕ್ಕೆ ನಾಲ್ಕನೇ ಹುಟ್ಟು ಹಬ್ಬದ ಸಂಭ್ರಮ
ಮಮತಾ ಒಪ್ಪಿಗೆ- ಮೇ 24ಕ್ಕೆ ಸರ್ವಪಕ್ಷ ಸಭೆ