ಉತ್ತರ ಕಾಶ್ಮೀರದ ಬಾರಮುಲ್ಲಾದಲ್ಲಿ ಬೆಟ್ಟದ ತಪ್ಪಲಲ್ಲಿ ಕಾಡಿನೊಳಗೆ ಅವಿತಿದ್ದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ ಭದ್ತಾ ಸಿಬ್ಬಂದಿ ಓರ್ವನನ್ನು ಹತ್ಯೆಗೈದಿದ್ದಾರೆ.
ಸತತ 10 ತಾಸುಗಳ ಕಠಿಣ ಗುಂಡಿನ ಕಾರ್ಯಾಚರಣೆಯಲ್ಲಿ ಈ ಸಾಧನೆ ನಡೆಸಿಲಾಗಿದೆ. ಕಳೆದ ದಿನ ಸಂಭವಿಸಿದ ಭಾರತೀಯ ಸೈನಿಕರು ಮತ್ತು ಲಷ್ಕರ್ ಇ ತೋಯ್ಬಾ ಉಗ್ರಗಾಮಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಭದ್ರತ ಪಡೆಯ ಇಬ್ಬರು ಹುತಾತ್ಮರಾಗಿದ್ದು, ಇಬ್ಬರು ಉಗ್ರಗಾಮಗಳು ಹತರಾಗಿದ್ದರು. ಹಲವರು ಗಾಯಗೊಂಡಿದ್ದರು.
ಹುತಾತ್ಮರಾದ ಭದ್ರತಾ ಪಡೆಯವರಲ್ಲಿ ಓರ್ವ ಸೈನಿಕ, ಓರ್ವ ಪೊಲೀಸ ಸಿಬ್ಬಂಧಿ ಎಂದು ತಿಳಿಸಲಾಗಿದೆ. ಬಾರಮುಲ್ಲಾ ಜಿಲ್ಲೆಯ ಶೀರಿ ಎಂಬಲ್ಲಿನ ಬೆಟ್ಟ ಪ್ರದೇಶದಲ್ಲಿ ಪ್ರಸ್ತುತ ಕಾರ್ಯಾಚರಣೆ ಸಂಭವಿಸಿದೆ.
|