ದೇಶದ ರಾಜಧಾನಿ ನವದೆಹಲಿಯಲ್ಲಿ ಮಾನವಚಾಲಿತ ಸೈಕಲ್ ರಿಕ್ಷಾಗಳನ್ನು ನಿಷೇಧಿಸಿರುವ ಸರ್ಕಾರವು ಇಂದು ಸಿಎನ್ಜಿ( ನೈಸರ್ಗಿಕ ಅನಿಲ) ಚಾಲಿತ ಬಸ್ಗಳ ಸಂಚಾರವನ್ನು ಅಧಿಕೃತವಾಗಿ ಆರಂಭಿಸಿದೆ.
ದೆಹಲಿಯಲ್ಲಿ ಸಿಎನ್ಜಿ ಮಿನಿ ಬಸ್ಗಳ ಸಂಚಾರ ಆರಂಭಿಸಿರುವುದು ಹಾಗೂ ಸೈಕಲ್ ರಿಕ್ಷಾಗಳ ಸಂಚಾರ ನಿಷೇಧಿಸಿರುವುಗು ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಕಳೆದ ವಾರಾಂತ್ಯದಿಂದ ಸೈಕಲ್ ರಿಕ್ಷಾ ವಾಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಬಸ್ ಸಂಚಾರ ಅಧಿಕೃತ ಉದ್ಘಾಟನೆ ಜರುಗಿದೆ.
ಚಾಂದನಿ ಚೌಕದಲ್ಲಿ ಸಿಎನ್ಜಿ ಮಿನಿಬಸ್ ಸಂಚಾರ ಉದ್ಘಾಟನೆ ನಡೆಯುತ್ತಿರುವಂತೆಯೇ ಇದೇ ಭಾಗದಲ್ಲಿ ಸೌಕಲ್ ರಿಕ್ಷಾ ಏಳೆಯುವವರು ಪ್ರತಿಭಟನೆ ನೆಡೆಸಿದರು. ಬಸ್ಗಳ ಸಂಚಾರ ತಡೆಯಲು ಪ್ರಯತ್ನಿಸಿದರು.
ಚಾಂದನಿ ಚೌಕದಲ್ಲಿದ್ದ ಸೌಕಲ್ ರಿಕ್ಷಾಗಳನ್ನು ಪೊಲೀಸರು ತೆರವು ಗೊಳಿಸುತ್ತಿದ್ದಂತೆಯೇ ಪ್ರತಿಭಟನೆ ತೀವ್ರವಾಗಿತ್ತು. ಬಿಗು ಪೊಲೀಸ್ ಬಂದೋ ಬಸ್ತಿನ ನಡುವೆ ಸೈಕಲ್ ರಿಕ್ಷಾಗಳನ್ನು ಮಹಾನಗರ ಹಾಗೂ ರಾಜಧಾನಿ ಆಡಳಿತ ತೆರವುಗೊಳಿಸಿ, ಹಂತಹಂತವಾಗಿ ಬಸ್ನ್ನು ಪ್ರಾರಂಭಿಸುತ್ತಿದೆ.
|