ಸಿಡಿಲು ಹಾಗೂ ಭಾರೀ ಮಳೆಯಿಂದ ತತ್ತರಿಸಿರುವ ಜಾರ್ಖಂಡಿನಲ್ಲಿ ಕಳೆದ 12 ತಾಸುಗಳವಧಿಯಲ್ಲಿ ಕನಿಷ್ಠಪಕ್ಷ 10 ಮಂದಿ ಮಿಂಚು-ಸಿಡಿಲಿನ ಆಘಾತದಿಂದ ಸಾವನ್ನಪ್ಪಿದ್ದಾರೆ.
ಮೃತಪಟ್ಟವರಲ್ಲಿ 6 ಮಂದಿಮಕ್ಕಳೂ ಸೇರಿದ್ದು, ಇತರರು ಪ್ರೌಢರು ಎಂದು ಪ್ರಾಥಮಿಕ ವರದಿ ತಿಳಿಸಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾು ಇತರ 7 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ತನ್ಮಧ್ಯೆ ರಾಂಪುರ್ನಲ್ಲಿ ತರಗತಿಗಳಲ್ಲಿ ವ್ಯಾಸಂಗನಿರತ ವಿದ್ಯಾರ್ಥಿಗಳ ಮೇಲೆ ಸಿಡಿಲು ಅಪ್ಪಳಿಸಿ ಹಲವರು ಗಾಯಗೊಂಡಿದ್ದಾರೆ. ಬಿರುಸಿನ ಮಳೆ, ಗಾಳಿ ಸಿಡಿಸನಿಂದಾಗಿ ರಾಜ್ಯದಲ್ಲಿ ಜನಜೀವನ ಸಂಕಷ್ಟಕ್ಕೀಡಾಗಿದೆ.
ಪಶ್ಚಿಮಬಂಗಾಳ: ಪಶ್ಚಿಮ ಬಂಗಾಳದಲ್ಲಿ ಕಳೆದ 24 ತಾಸುಗಳವಧಿಯಲ್ಲಿ ಕುಂಭದ್ರೋಣ ಮಳೆಯಿಂದ ರಾಜಧಾನಿ ಕೊಲ್ಕೊತ್ತಾ ಸೇರಿದಂತೆ ಪ್ರದೇಶಗಳು ಜಲಾವೃತವಾಗಿವೆ.
ತಗ್ಗುಪ್ರದೇಶಗಳು ನೆರೆಹಾವಳಿಗೆ ತುತ್ತಾಗಿವೆ. ನೆರೆಹಾವಳಿಯಿಂದಾಗಿ ರೈಲು, ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಿಂಚಿನಿಂದಾಗಿ ಕೊಲ್ಕೊತ್ತಾ ವಿಮಾನ ನಿಲ್ದಾಣ ಒಂದು ತಾಸು ಕಾಲ ಸ್ಥಗಿತಗೊಳಿಸಬೇಕಾಗಿ ಬಂತು.
|