ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಡಿಎಂಕೆ-ಎಡರಂಗ ಮಾತುಕತೆ ಅನಿಶ್ಚಿತ
webdunia
CM karuna nidhi
PTI
ಯುಪಿಎ ಒಕ್ಕೂಟದ ರಾಷ್ಟ್ರಪತಿಅಭ್ಯರ್ಥಿ ಬೆಂಬಲಕ್ಕಾಗಿ ಡಿಎಂಕೆ ಹಾಗೂ ಎಡರಂಗ ಪಕ್ಷಗಳು ಇಂದಿಲ್ಲಿ ನಡೆಸಿದ ಮಾತುಕತೆ ಮೊದಲ ಹಂತದಲ್ಲಿ ಸಫಲವಾಗದಿರುವ ಹಿನ್ನೆಲೆಯಲ್ಲಿ ಸಂಜೆ ಮತ್ತೆ ಮಾತುಕತೆ ಮುಂದುವರಿಸಲು ನಿರ್ಧರಿಸಲಾಗಿದೆ.

ಎಡರಂಗದ ಪರವಾಗಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್, ಸಿಪಿಐ ಪ್ರಧಾನ ಕಾರ್ಯದರ್ಶಿ ಎ ಬಿ ಬರ್ದಾನ್ ಮತ್ತು ಡಿ ರಾಜಾ ಇವರು ಡಿಎಂಕೆ ಮುಖ್ಯಸ್ಥ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರನ್ನು ಭೇಟಿ ಮಾಡು ಮಾತುಕತೆ ನಡೆಸಿದ್ದರು.

ಬಳಿಕ ಕರುಣಾನಿಧಿಯವರು ಪ್ರಧಾನಿ ಮನಮೋಹನ್‌ ಸಿಂಗ್ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಸುದೀರ್ಘ 30 ನಿಮಿಷಗಳ ಕಾಲ ನಡೆಯಿತು.

ಕಾಂಗ್ರೆಸ್‌ ಮೂರು ಹೆಸರುಗಳನ್ನು ಸೂಚಿಸಿತ್ತಲ್ಲವೇ ಎಂಬ ಪ್ರಶ್ನೆಗೆ ಸಿಪಿಐನ ಬರ್ದಾನ್‌ ನಮಗೆಯಾವ ಹೆಸರನ್ನೂ ತಿಳಿಸಿಲ್ಲ ಎಂದರು. ನಾವು ಕೇವಲ ರಾಷ್ಟ್ರಪತಿಯಾಗುವವರ ಕುರಿತಾದ ದೃಷ್ಟಿಕೋನಗಳನ್ನಷ್ಟೇ ಹಂಚಿಕೊಂಡಿದ್ದೇವೆ ಎಂದು ಪ್ರಕಾಶ್‌ ಕಾರಟ್ ತಿಳಿಸಿದ್ದಾರೆ.
ಮತ್ತಷ್ಟು
ದೆಹಲಿ, ಕರ್ನಾಟಕಗಳಲ್ಲೂ ಕೇರಳದ ಗುನ್ಯಾ
ಮಿಂಚು- ಮಕ್ಕಳೂ ಸೇರಿ 10 ಬಲಿ
ಕಾನೂನುಬಾಹಿರ ಹೈಕೋ- ಮುಂದುವರಿದ ಸಂಪು
ಪ್ರಧಾನಿಯ ಪಕ್ಷಕೆಲಸಕ್ಕಾಗಿ ಸಂಪುಟ ಸಭೆ ಮುಂದಕ್ಕೆ!
ಸಂಜಯ್‌ ದತ್ ತೀರ್ಪಿಗಾಗಿ ಕಾತರ
ಗಾಂಧೀಜಿ ಮೊಮ್ಮಗ ನಿಧನ- ಪರಿವಾರ ಆಗಮನ