ದೆಹಲಿ ಕೊನೆಗೂ ತಣ್ಣಗಾಗಿದೆ. ಇದು ಯಾವುದೋ ಉದ್ವಿಗ್ನತೆಯ ಫಾಲೋ ಅಪ್ ಅಲ್ಲ. ಸುಡುಬಿಸಿಲಿನಿಂದ ಕಾದ ಕಾವಲಿಯಾಗಿದ್ದ ದೆಹಲಿಗೆ ಇಂದು ಮಧ್ಯಾಹ್ನ ಮಳೆಯ ಸ್ನೇಹಸಿಂಚನವಾಗಿದೆ, ತಂಪೆರಚಿದೆ.
ಕಳೆದೊಂದು ವಾರದಿಂದ ಭಾರತದ ಉತ್ತರ ಹಾಗೂ ಮಧ್ಯಭಾಗದ ರಾಜ್ಯಗಳು ಬಿರುಬಿಸಿಲಿ ಝಳದಿಂದ ತತ್ತರಿಸಿದ್ದವು. ಜನತೆ ಬಿಸಿಲಿನ ತೀಕ್ಷ್ಣತೆ, ಬಿಸಿಗಾಳಿಯ ಆಘಾತದಿಂದ ಸಂಕಷ್ಟಕ್ಕೀಡಾಗಿದ್ದರು.
ಶುಕ್ರವಾರ ಅಪರಾಹ್ನದಿಂದ ಸುರಿಯುತ್ತಿರುವ ಮಳೆ ಮುಂಗಾರಿನ ಸೂಚನೆ ಎನ್ನಲಾಗುತ್ತಿದೆಯಾದರೂ ಅದಿನ್ನೂ ದೃಢಪಡಬೇಕಿದೆ. ಆದರೂ ಬಿಸಿಲಿನಿಂದ ಬೆಂಡಾದ ಜನರು ಮಳೆಯಲ್ಲಿ ನನೆದು, ಕುಣಿದು ಕುಪ್ಪಳಿಸಿದರು.
ಬಿಸಿಲಿನ ತಾಪ, ಬಿಸಿಗಾಳಿಯ ಪ್ರಕೋಪದಿಂದಾಗಿ ಇದುವರೆಗೆ 150ರಷ್ಟು ಜನರ ಜೀವಹಾನಿಯಾಗಿರುವ ಮಾಹಿತಿ ರಾಜಧಾನಿ ದೆಹಲಿ, ನೆರೆಯ ಇತರ ರಾಜ್ಯಗಳನ್ನಾಧರಿಸಿ ಸಂಭವಿಸಿದತ್ತು.
|