ಮುಂಬೈ ಟ್ರೇಡ್ ಸೆಂಟರ್ಗೆ ಬಾಂಬ್ಸ್ಫೋಟ ಬೆದರಿಕೆ ಬಂದಿರುವ ಬೆನ್ನಲ್ಲೇ ಇದೀಗ ಹೆಸರಾಂತ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸುರಕ್ಷತೆಗೆ ಬೆದರಿಕೆ ಹಾಕಲಾಗಿದೆ. ಬಿಗು ಪಹರೆ ಏರ್ಪಡಿಸಲಾಗಿದೆ.
ಭಾನುವಾರ ಮುಂಬೈಯ ವಿಶ್ವ ವ್ಯಾಪಾರ ಕೇಂದ್ರ(ವರ್ಲ್ಡ್ ಟ್ರೇಡ್ ಸೆಂಟರ್)ರನ್ನು ಸ್ಫೋಟಿಸುವುದಾಗಿ ಉಗ್ರಗಾಮಿ ಸಂಘಟನೆಗಳ ಹೆಸರಲ್ಲಿ ಬೆದರಿಕ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆ, ಕಟ್ಟೆಚ್ಚರದ ಕಾವಲು ಒದಗಿಸಲಾಗಿತ್ತು.
ಇದೀಗ ಸೆಂಟ್ರಲ್ ಮುಂಬೈಯಲ್ಲಿರುವ ಪ್ರಾಚೀನ ಹಾಗೂ ಭಕ್ತಾದಿಗಳ ದಟ್ಟಣೆ ಇರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸರದಿ. ದೇವಸ್ಥಾನ ಹಾಗೂ ಭಕ್ತಾದಿಗಳ ಸಂರಕ್ಷಣೆಗಾಗಿ ಸಶಸ್ತ್ರ ಪೋಲೀಸರು ಬಿಗುಪಹರೆ ಏರ್ಪಡಿಸಲಾಗಿದೆ.
ದೇವಸ್ಥಾನ ಪ್ರಾಕಾರದ ಆಯಕಟ್ಟಿನ ಭಾಗದಲ್ಲಿ ಲೋಹ ಪತ್ತೆ ಹಾಗೂ ಬಾಂಬ್ ಪತ್ತೆ ಸಲಕರಣೆಗಳನ್ನು ಏರ್ಪಡಿಸಲಾಗಿದೆ.
|