ಹಿಮಾಚಲ ಪ್ರದೇಶದಲ್ಲಿ ಬಸ್ಸೊಂದು ಕಮರಿಗೆ ಉರುಳಿದ ಪರಿಣಾಮ 11 ಮಂದಿ ಸಾವಿಗೀಡಾಗಿ 22 ಮಂದಿ ತೀವ್ರ ಗಾಯಗೊಂಡಿದ್ದಾರೆ.
ಧರ್ಮಶಾಲಾ ಬಳಿಯ ಕೈಂಚಿಮೋಡ ಎಂಬಲ್ಲಿ ಕಳೆದ ರಾತ್ರಿ ಪ್ರಸ್ತುತ ದುರಂತ ಸಂಭವಿಸಿದೆ. ಪೊಲೀಸ್ ಮೂಲಗಳ ಹೇಳಿಕೆಯಂತೆ ಚಾಲಕನ್ನು ತಿರುವೊಂದರಲ್ಲಿ ಚಲಾಯಿಸುತ್ತಿದ್ದಂತೆಯೇ ನಿಯಂತ್ರಣ ಮೀರಿದ ಬಸ್ ದುರಂತಕ್ಕೀಡಾಗಿದೆ.
ಬಸ್ನಲ್ಲಿ ವೈಷ್ಣೋದೇವಿ ದೇವಸ್ಥಾನ ಸಂದರ್ಶನದ ಪ್ರವಾಸಿಗರಿದ್ದರು ಎಂಬ ಮಾಹಿತಿ ಲಭಿಸಿದೆ. ಇವರು ಪಂಜಾಬ್ ಹಾಗೂ ಹಿಮಾಚಲ ಪ್ರದೇಶದಲ್ಲಿರುವ ಪ್ರವಾಸಿ ತಾಣಗಳನ್ನು ವೀಕ್ಷಿಸಿ ವಾಪಸಾಗುತ್ತಿದ್ದರೆನ್ನಲಾಗಿದೆ.
ಗಾಯಾಳುಗಳನ್ನು ದೆಹಲಿ, ದರ್ಮಶಾಲಾ ಮುಂತಾದೆಡೆಯ ಆಸ್ಪತ್ರೆಗೆ ಸೇರಿಸಲಾಗಿದೆ. ಮುಖ್ಯಮಂತ್ರಿ ವೀರಭದ್ರ ಸಿಂಗ್ ಪ್ರಕರಣದ ಕುರಿತಂತೆ ತಮ್ಮ ವಿಶಾದ ವ್ಯಕ್ತಪಡಸಿದ್ದಾರೆ.
|