ಸಿಖ್ ಸಮುದಾಯ ಘರ್ಷಣೆಗೆ ಕಾರಣವಾದ ದೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್ ಅವರನ್ನು ನ್ಯಾಯಾಲಯ ಆದೇಶದನ್ವಯ ಬಂಧಿಸಲು ಇದೀಗ ಪೊಲೀಸರು ಪಂಜಾಬ್ ರಾಜ್ಯ ಸರ್ಕಾರದ ಅನುಮತಿಗಾಗಿ ಮನವಿ ಸಲ್ಲಿಸಿದ್ದಾರೆ.
ಪ್ರಸ್ತತ ಸಿಖ್ ಸಮುದಾಯ ವಿಭಾಗದ ಮುಖ್ಯಸ್ಥನಿಂದ ಸ್ಥಳೀಯ ಸಿಖ್ ಸಮುದಾಯದವರ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ ಎಂಬ ಅರ್ಜಿಯ ಮೇಲೆ ನ್ಯಾಯಾಲಯವು ಗುರ್ಮೀತ್ ಅವರ ವಿರುದ್ಧ ನ ಬಂಧನ ಮತ್ತಿತರ ಕಾನೂನು ಕ್ರಮಕ್ಕೆ ಆದೇಶಿಸಿತ್ತು.
ಸರ್ಕಾರ ಇದೀಗ ನಿರ್ಧಾರ ಸ್ವೀಕರಿಸಬೇಕಾಗಿದೆ. ಪೊಲೀಸ್ ಇಲಾಖೆಯ ಅರ್ಜಿ ಇದೀಗ ಪರಿಶೀಲನೆಯಲ್ಲಿದೆ ಎಂಬುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್ ಐ ಸಿಂಗ್ ತಿಳಿಸಿದ್ದಾರೆ.
ಪ್ರಸ್ತುತ ಧಾರ್ಮಿಕ ಗುರುವಿನ ಬಂಧನಕ್ಕಾಗಿ ಮೇ 20ರಂದು ಬಟಿಂಡಾ ನ್ಯಾಯಾಲಯವು ಷರ್ತ ಬದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿತ್ತು. ಬಂಧನಕ್ಕಾಗಿ ರಾಜ್ಯ ಸರ್ಕಾರದ ಅನುಮೋದನೆ ಕೋರಲು ಕೂಡ ನ್ಯಾಯಾಲಯ ಸೂಚಿಸಿತ್ತು.ಪ್ರಸ್ತುತ ಬಂಧನ ಆದೇಶ ಜುಲೈ 1ರ ವರೆಗೆ ಜಾರಿಯಲ್ಲಿರುತ್ತಿದೆ.
|