ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಳೆಯಿಂದ ತತ್ತರಿಸಿದ ಮುಂಬೈ
webdunia
ದೇಶದ ವಾಣಿಜ್ಯಿಕ ರಾಜಧಾನಿ ಮುಂಬೈಯಲ್ಲಿ ಮುಂಗಾರು ಮಳೆಯ ಪ್ರಕೋಪಕ್ಕೆ ಸಾವುನೋವು ಆಸ್ತಿಪಾಸ್ತಿ ಹಾನಿಯ ವರದಿಗಳು ದಾಖಲಾಗತೋಡಗಿವೆ.

ಚೆಂಬೂರಿನಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ 12 ಮಂದಿ ಮಣ್ಣಿನಡಿ ಸಮಾಧಿಯಾಗಿದ್ದಾರೆ. ಇವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ.

ಮುಂಬೈಯಲ್ಲಿ ಈ ಬಾರಿಯ ಮುಂಗಾರಿನ ಆರಂಭಿಕ ಮಳೆ ಗಂಭೀರ ಸ್ವರೂಪ ಪಡೆದಿದೆ. ಕಳೆದ 24 ತಾಸುಗಳವಧಿಯಲ್ಲಿ ಕೊಲಾಬಾದಲ್ಲಿ 279 ಮಿಮೀ ಮಳೆಯಾಗಿದ್ದರೆ, ಸಾಂತಾಕ್ರೂಜ್‌ನಲ್ಲಿ 209 ಮಿಮೀ ಮಳೆಯಾಗಿದೆ.

ಗ್ರಾಂಟ್ ರೋಡ್‌ನಲ್ಲಿ ಕಟ್ಟಡವೊಂದು ಕುಸಿದು 1 ಸಾವು ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಮಳೆಯ ಆಘಾತದಿಂದಾಗಿ ಮುಂಬೈ ತತ್ತರಿಸಿದೆ.
ಮತ್ತಷ್ಟು
ದೋಣಿ ಮುಳುಗಿ 31 ಸಾವು
ರಾಜಕೀಯಬೇಡವೆಂದು ವಿರಮಿಸಿದೆ-ಕಲಾಂ
ಸಿಖ್ ಗುರು ಸೆರೆ- ಸರ್ಕಾರ ಪರಿಶೀಲನೆ
ಮಳೆಗೆ 55 ಬಲಿ-ಆಂಧ್ರದಲ್ಲಿ ಸೇನೆ
ರಾಷ್ಟ್ರಪಿತನಿಗೆ ವಂದಿಸಿ ನಾಪತ್ರಸಲ್ಲಿಸಿದ ಪ್ರತಿಭಾ
ಮುಂಗಾರು ಪ್ರಬಲ-ಕಳೆದ ವರ್ಷಕ್ಕಿಂತ ದುರ್ಬಲ