ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣಾ ಕಣ ರಂಗೇರುತ್ತಿದ್ದು, ಎನ್ಡಿಎ ಬೆಂಬಲಿತ ಅಭ್ಯರ್ಥಿ (ಉಪರಾಷ್ಟ್ರಪತಿ)ಭೈರೋನ್ ಸಿಂಗ್ ಶೆಖಾವತ್ ಇಂದು ನಾಮಪತ್ರ ಸಲ್ಲಿಸುವರೆಂದು ನಿರೀಕ್ಷೆ ಇದೆ.
ತೃತೀಯ ರಂಗ ರಾಷ್ಟ್ರೀಯ ಪ್ರಗತಿಪರ ಐಕ್ಯರಂಗ (ಯುಎನ್ಪಿಎ) ಹೊಸ ಅಭ್ಯರ್ಥಿ ಆಯ್ಕೆ ನಡೆಸುತ್ತಿದೆ ಎನ್ನಲಾಗುತ್ತಿದೆಯಾದರೂ ಶೆಕಾವತ್ ಅವರನ್ನೇ ಬೆಂಬಲಿಸುವರೋ ಕಾದು ನೋಡಬೇಕಿದೆ.
ಕಾಂಗ್ರೆಸ್ ಎಡರಂಗ ಒಕ್ಕೂಟ ಯುಪಿಎ ಅಭ್ಯರ್ಥಿಯಾಗಿ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿರುವಂತೆಯೇ, ಭಾರೀ ನಿರಕ್ಷೆಯಲ್ಲಿದ್ದ ಡಾ. ಅಬ್ದುಲ್ ಕಲಾಂ ಅವರ ಎರಡನ್ ಅವಧಿ ಅಧಿಕಾರ ನಿರಾಕರಣೆಯಿಂದ ಸ್ಪರ್ಧಾ ಕಣ ನಿಚ್ಛಳವಾಗಿದೆ.
ಬೈರೋನ್ ಸಿಂಗ್ ಶೆಖಾವತ್ ಅವರ ನಾಮಪತ್ರದೊಂದಿಗೆ ರಾಷ್ಟ್ರಪತಿ ಆಯ್ಕೆ ಚುನಾವಣಾ ಕಣ ಮತ್ತಷ್ಟು ಪೈಪೋಟಿಯ ರಂಗವಾಗುತ್ತಿದೆ.
|